"ಡಿಸಿಎಂ ಬೇಡ.. ನಮ್ಮ ಟಾರ್ಗೆಟ್ ಸಿಎಂ ಕುರ್ಚಿ" ಎಂದ ಶಾಮನೂರು..!

"ಡಿಸಿಎಂ ಬೇಡ.. ನಮ್ಮ ಟಾರ್ಗೆಟ್ ಸಿಎಂ ಕುರ್ಚಿ" ಎಂದ ಶಾಮನೂರು..!

Published : Oct 02, 2023, 02:37 PM IST

ಕಾಂಗ್ರೆಸ್‌ನಲ್ಲಿ “ಲಿಂಗಾಯತ ದಂಗಲ್” ಸಿದ್ದುಗೆ ಹೊಸ ಸವಾಲ್..!
ಲಿಂಗಾಯತ ಶಾಸಕರ ಅಸಹನೆ..ಆಕ್ರೋಶ..ಏನಿದರ ಗುಟ್ಟು..?
ಸಿದ್ದರಾಮಯ್ಯ ಬೆನ್ನಿಗೆ ನಿಂತು ಶಾಮನೂರುಗೆ ಕುಟುಕಿದ ಹಳ್ಳಿಹಕ್ಕಿ..!

ಕಾವೇರಿ ಜಲ ಸಂಘರ್ಷದ ಚಕ್ರವ್ಯೂಹದಲ್ಲಿ ಸಿಲುಕಿರೋ ಕಾಂಗ್ರೆಸ್ (Congress) ಸರ್ಕಾರಕ್ಕೆ ಮತ್ತೊಂದು ಚಕ್ರವ್ಯೂಹ. ಇದು ಪಕ್ಕಾ ಪೊಲಿಟಿಕಲ್ ಚಕ್ರವ್ಯೂಹ. ಸರ್ಕಾರದ ಬುಡದಲ್ಲೇ ಎದ್ದು ನಿಂತಿರೋ ಲಿಂಗಾಯತ(Lingayat) ಚಕ್ರವ್ಯೂಹ. ಆ ವ್ಯೂಹದ ಗುರಿ ಸಿಎಂ ಪಟ್ಟ. ವೀರಶೈವ-ಲಿಂಗಾಯತರಿಗೆ ಮುಖ್ಯಮಂತ್ರಿ ಪಟ್ಟ ಕೊಡ್ಬೇಕು ಅಂತ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ(Shamanur Shivashankarappa) ಹೇಳಿದ್ದಾರೆ. ಅಷ್ಟೇ ಅಲ್ಲ, ಈ ಸರ್ಕಾರದಲ್ಲಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗ್ತಿದೆ ಅಂದಿದ್ದಾರೆ. ಡಿಸಿಎಂ ದಂಗಲ್ ಆಯ್ತು..ಈಗ ಸಿಎಂ ಪಟ್ಟಕ್ಕೇ ಫೈಟ್. ಕಾಂಗ್ರೆಸ್ ಸರ್ಕಾರದಲ್ಲಿ ದಿನಕ್ಕೊಂದು ರಗಳೆ, ಸಿದ್ದರಾಮಯ್ಯನವರಿಗೆ ದಿನಕ್ಕೊಂದು ಟೆನ್ಷನ್. ತ್ರಿವಳಿ ಡಿಸಿಎಂ ಹುದ್ದೆಗಾಗಿ ಕೂಗು ಎದ್ದು ಆ ಬಿಸಿ ತಣ್ಣಗಾದ ಬೆನ್ನಲ್ಲೇ ಈಗ ಅಂತರ್ಯುದ್ಧದ ನೇರ ಟಾರ್ಗೆಟ್ ಮುಖ್ಯಮಂತ್ರಿ ಪಟ್ಟ. ರಾಜ್ಯ ಕಾಂಗ್ರೆಸ್‌ಗೆ ಅಂತರ್ಯುದ್ಧ ಹೊಸತೂ ಅಲ್ಲ, ಅದ್ಕೆ ಕೊನೆಯೂ ಇಲ್ಲ. ಅಂತರ್ಯುದ್ಧ, ಅಂತಃಕಲಹ ಅಂತ ಬಂದ್ರೆ ಕಾಂಗ್ರೆಸ್‌ನಲ್ಲಿ ಅದಕ್ಕೊಂದು ದೊಡ್ಡ ಚರಿತ್ರೆಯೇ ಇದೆ. ಕಾಲ ಕಾಲಕ್ಕೆ ಕಾಂಗ್ರೆಸ್‌ನಲ್ಲಿ ಈ ಆಂತರಿಕ ಗುದ್ದಾಟ, ಕಚ್ಚಾಟ, ಕಾಲೆಳೆಯುವ ಪರಿಪಾಠ ಮುಂದುವರಿದುಕೊಂಡೇ ಬಂದಿದೆ. ನಾವಿವತ್ತು ಹೇಳ್ತಾ ಇರೋದು ಅದರ ಮುಂದುವರಿದ ಅಧ್ಯಾಯ. ಮೊನ್ನೆ ಮೊನ್ನೆಯಷ್ಟೇ ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಸಿಎಂ ದಂಗಲ್ ದೊಡ್ಡ ಸದ್ದು ಮಾಡಿತ್ತು. ಆ ದಂಗಲ್"ಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದ ಬೆನ್ನಲ್ಲೇ ಈಗ ಸಿಎಂ ಪಟ್ಟದ ದಂಗಲ್ ಶುರುವಾಗಿದೆ. 

ಇದನ್ನೂ ವೀಕ್ಷಿಸಿ:  ಬರ್ಲಿನ್ ಕನ್ನಡ ಬಳಗದಿಂದ ಜರ್ಮನಿಯಲ್ಲಿ ಕನ್ನಡಿಗರ ಕ್ರೀಡಾ ಸ್ಪೂರ್ತಿ !

05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
Read more