ಸಚಿವ ಸ್ಥಾನಕ್ಕಾಗಿ ಮುಂದುವರಿದ ಕತ್ತಿ ವರಸೆ..!

Jan 29, 2020, 4:06 PM IST

ಬೆಂಗಳೂರು/ಬೆಳಗಾವಿ, (ಜ.29): ಸಧ್ಯ ಕೇಸರಿ ಪಾಳಯದಲ್ಲಿ ಸಂಪುಟ ವಿಸ್ತರಣೆಯದ್ದೇ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಎರಡನೇ ಹಂತದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಯಾರಿಗಿಲ್ಲ ಎನ್ನುವುದರ ಬಗ್ಗೆ ಬಿಜೆಪಿಯಲ್ಲಿ ಮಾತುಗಳು ಜೋರಾಗಿವೆ. 

ಸಂಪುಟ ವಿಸ್ತರಣೆ: ಕೆಲ ಸಂಭಾವ್ಯ ಸಚಿವರ ಹೆಸರು ಘೋಷಿಸಿದ ಯಡಿಯೂರಪ್ಪ

ಮತ್ತೊಂದೆಡೆ ಸಚಿವಾಕಾಂಕ್ಷಿಗಳು ಕೂಡ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ.  ಅದರಲ್ಲೂ ಪ್ರಮುಖವಾಗಿ ಹಿರಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಸಚಿವ ಸ್ಥಾನ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದು, ದೆಹಲಿ ಮಟ್ಟದಲ್ಲಿ ಕಸರತ್ತು ನಡೆಸಿದ್ದಾರೆ. ಸಾಲದಕ್ಕೆ ಅಂತಿಮವಾಗಿ ಬಿಎಸ್‌ವೈ ದುಂಬಾಲು ಬಿದ್ದಿದ್ದಾರೆ.