ಹಿಂದು ಪದ ಅಶ್ಲೀಲ ಹೇಳಿಕೆ ಡ್ಯಾಮೇಜ್ ಸರಿಪಡಿಸಲು ಜಾರಕಿಹೊಳಿ ಕಸರತ್ತು, ಮನುವಾದಿ ಚರ್ಚೆ ಸೃಷ್ಟಿ!

Jan 14, 2023, 10:54 PM IST

ಹಿಂದು ಪದ ಅಶ್ಲೀಲ ಎಂದ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಸಂಭಾಜಿ ಮಹಾರಾಜರ ವಿರುದ್ಧವೂ ಹರಿಹಾಯ್ದಿದ್ದರು. ಆದರೆ ಜಾರಕಿಹೊಳಿ ಈ ಮಾತಿಗೆ ಎಲ್ಲೆಡೆಗಳಿಂದ ಆಕ್ರೋಶ ವ್ಯಕ್ತವಾಗುತ್ತಲೇ ಇದೆ. ಹೀಗಾಗಿ ಡ್ಯಾಮೇಜ್ ಕಂಟ್ರೋಲ್‌ಗಾಗಿ ಸತೀಶ್ ಜಾರಕಿಹೊಳಿ ಬೆಳಗಾವಿಯ ಕಡೋಲಿಯಲ್ಲಿ ಸ್ವರಾಜ ಸಂಕಲ್ಪ ಸಭೆ ನಡೆಸಿ ಬಿಜೆಪಿ, ಚಕ್ರವರ್ತಿ ಸೂಲೆ ಬೆಲೆ ವಿರುದ್ಧ ಹರಿಹಾಯ್ದರು. ಇದೇ ವೇಳೆ ಕಳೆದ ಬಾರಿ ಸಂಭಾಜಿಗೆ ಮಾಡಿದ ಅವಮಾನ ಸರಿಪಡಿಸಲು ಶಿವಾಜಿ ಮಹಾರಾಜ ಹಾಗೂ ಸಂಭಾಜಿಗೆ ಮನುವಾದಿಗಳು ಹಿಂಸೆ ನೀಡಿದ್ದಾರೆ ಎಂದರು. ಇತ್ತ ಯಮಕನಮರಡಿಯಲ್ಲಿ ನಿಂತು ಹಿಂದೂ ಸಮಾವೇಶ ಮಾಡಿದ ಸೂಲಿಬೆಲೆ, ಜಾರಕಿಹೊಳಿಗೆ ಚಾಲೆಂಜ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜಾರಕಿಹೊಳಿ ಅವರ ಭಾಷೆ ನಮ್ಮವರಿಗೆ ಅರ್ಥವಾಗಲ್ಲ, ಲಕ್ಸ್ ಸಾಬೂನ್ ಹಾಕಿ ತೊಳೆಯಲು ನಮಗೂ ಬರುತ್ತೆ ಎಂದರು.