ಸಿದ್ದರಾಮಯ್ಯಗೆ ಚಡ್ಡಿ ಪಾರ್ಸೆಲ್ ಮಾಡಿದ ಆರೆಸ್ಸೆಸ್‌ ಕಾರ್ಯಕರ್ತರು!

Jun 6, 2022, 7:30 PM IST

ಬೆಂಗಳೂರು (ಜೂನ್ 6): ಕರ್ನಾಟಕದಲ್ಲಿ (Karnataka) ದಿನದಿಂದ ದಿನಕ್ಕೆ ಚಡ್ಡಿ ಜಗಳ ಜೋರಾಗುತ್ತಿದೆ. ರಾಜ್ಯದಲ್ಲಿ ಆರೆಸ್ಸೆಸ್‌ ಚಡ್ಡಿ ಸುಡುವ ಅಭಿಯಾನ ಮಾಡುತ್ತೇವೆ ಎಂದು ಕಾಂಗ್ರೆಸ್ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಮಂಡ್ಯದಲ್ಲಿನ ಆರೆಸ್ಸೆಸ್‌ ಕಾರ್ಯಕರ್ತರು ಮನೆಮನೆಯಿಂದ ಚಡ್ಡಿ ಸಂಗ್ರಹ ಮಾಡಿ ಸಿದ್ದರಾಮಯ್ಯ (Siddaramaiah) ಅವರಿಗೆ ಪಾರ್ಸಲ್ ಮಾಡಿದ್ದಾರೆ.

ಕೆಆರ್ ಪೇಟೆಯ ಆರೆಸ್ಸೆಸ್‌ ಕಾರ್ಯಕರ್ತರಿಂದ ಚಡ್ಡಿಯನ್ನು ಪಾರ್ಸಲ್ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೆಸ್ಸೆಸ್‌  ಚಡ್ಡಿ ಸುಡುತ್ತೇವೆ ಎಂದು ಹೇಳಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಚಡ್ಡಿಯನ್ನು ಸಿದ್ಧರಾಮಯ್ಯಗ್ಗೆ ಪಾರ್ಸಲ್ ಮಾಡಿದ್ದು, ಜೀವನಪೂರ್ತಿ ಕಳೆದರೂ ನಿಮಗೆ ಆರೆಸ್ಸೆಸ್‌  ಚೆಡ್ಡಿ ಸುಟ್ಟುಹಾಕಲು ಸಾಧ್ಯವಿಲ್ಲ. ಅಷ್ಟು ಚಡ್ಡಿಯನ್ನು ಕಳಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

'ನಾನು ಹೇಳಿದ್ದು ತಪ್ಪು ಅನ್ನೋಕೆ ಪ್ರತಾಪ್ ಸಿಂಹ ಆರ್ಥಿಕ ತಜ್ಞನೇನ್ರಿ.? ಸಿದ್ದರಾಮಯ್ಯ

ಆರೆಸ್ಸೆಸ್ ಚಡ್ಡಿಯನ್ನ ಸುಡುವ ಮುನ್ನ ಅದರ ಮಹತ್ವವೇನು, ದೇಶ ಕಟ್ಟುವ ಕಾರ್ಯದಲ್ಲಿ ಇದರ ಪಾತ್ರವೇನು ಅನ್ನೋದರ ಬಗ್ಗೆ ಸಿದ್ಧರಾಮಯ್ಯ ತಿಳಿದುಕೊಳ್ಳಲಿ. ಇಂದು ದೇಶದ ಇಡೀ ಮನೆಮನೆಯಲ್ಲಿ ಆರೆಸ್ಸೆಸ್ ಇದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಸ್ವಯಂಸೇವಕರು ಹೇಳಿದ್ದಾರೆ.