Nov 6, 2019, 6:39 PM IST
ಬೆಂಗಳೂರು (ನ.06): ಅನರ್ಹ ಶಾಸಕರಿಗೆ ಮಣೆ ಹಾಕೋ ಬಗ್ಗೆ ಬಿಜೆಪಿಯಲ್ಲಿ ಕಚ್ಚಾಟ ಕಡಿಮೆಯಾಗೋ ಲಕ್ಷಣ ಕಾಣಿಸುತ್ತಿಲ್ಲ. ಒಬ್ಬೊಬ್ಬರದ್ದು ಒಂದೊಂದು ರಾಗ.
ಈಗ ಬೆಂಗಳೂರಿನ ಪ್ರಮುಖ ಅನರ್ಹ ಶಾಸಕರ ವಿರುದ್ಧ ಬಂಡಾಯ ಹೊಸ ತಿರುವನ್ನು ಪಡೆದುಕೊಂಡಿದೆ. ಬಿಜೆಪಿ ನಾಯಕರು ಸೀದಾ ಹೈಕಮಾಂಡ್ಗೆ ದೂರು ನೀಡಿದ್ದಾರೆ.
ಕಳೆದ ಜೂನ್ -ಜುಲೈ ತಿಂಗಳಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ, ಸರ್ಕಾರ ಪತನಕ್ಕೆ ಕಾರಣವಾಗಿದ್ದರು. ಅದೇ ವೇಳೆ ನಡೆದ ರಾಜಕೀಯ ಹೈಡ್ರಾಮದಲ್ಲಿ ಅನರ್ಹತೆಗೊಳಗಾಗಿದ್ದಾರೆ.