ಬಿಜೆಪಿ ಅಧಿಕಾರಕ್ಕೆ ತರಲು ಸಿದ್ದು ಸುಪಾರಿ ತೆಗೊಂಡಿದ್ರು: ಹೆಚ್.ಡಿ.ಕೆ ಬಾಂಬ್

Feb 13, 2023, 6:07 PM IST

ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ತೆಗೆಯುತ್ತೇನೆ ಅಂದಿದ್ದರು‌. ಸಿದ್ದವನದಲ್ಲಿ ಅವರ ಮಾತನ್ನು ಕಾರ್ಯಕರ್ತರೇ ವಿಡಿಯೋ ಮಾಡಿದ್ರು. ಸರ್ಕಾರ ತೆಗೆಯುತ್ತೇನೆ ಅಂದಿದ್ರಲ್ಲಾ ನಾಚಿಕೆ ಆಗಲ್ವಾ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ. ಯಡಿಯೂರಪ್ಪ ಜತೆ ಸಿದ್ದರಾಮಯ್ಯ ಕೈ ಜೋಡಿಸಿದ್ರೂ, ಬಿಜೆಪಿ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಸುಪಾರಿ ತೆಗೆದುಕೊಂಡಿದ್ರು ಎಂದರು. ಬಿಜೆಪಿ ಅಕ್ರಮ ಹೊರ ತಂದಿದ್ದು ನಾನು, ಸಿದ್ದರಾಮಯ್ಯ ಅಲ್ಲ ಎಂದರು. ನಿಮ್ಮ ಯೋಗ್ಯತೆಗೆ ಸರಿಯಾದ ರೀತಿ ಮಾತನಾಡಿ. ಕುರ್ಚಿಗಾಗಿ ಕುತಂತ್ರ ರಾಜಕಾರಣ ಮಾಡುತ್ತೀರಿ ಎಂದು ಹೆಚ್‌.ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

Valentine's Day: ಪ್ರೇಮಿಗಳ ದಿನಾಚರಣೆ: ಗುಲಾಬಿ ಹೂವಿಗೆ ಡಿಮ್ಯಾಂಡ್