ಸಿದ್ದರಾಮಯ್ಯ ರಾಜಕೀಯ ಭವಿಷ್ಯ ನುಡಿದ ಮನೆದೇವರು, 2 ಕಡೆ ಸ್ಪರ್ಧೆಗೆ ಸೂಚನೆ!

Jan 13, 2023, 11:05 PM IST

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಈಗಾಗಲೇ ಚರ್ಚೆಯಾಗುತ್ತಿದೆ. ಇದರ ನಡುವೆ ಸಿದ್ದರಾಮಯ್ಯ ಮನೆ ದೇವರು ಎರಡು ಕಡೆ ಸ್ಪರ್ಧೆ ಮಾಡುವಂತೆ ಆದಿನಾಡು ಚಿಕ್ಕಮ್ಮದೇವಿ ಆಜ್ಞೆ ಮಾಡಿದೆ. ಡಾ.ಯತೀಂದ್ರಗೆ ಈ ಸೂಚನೆ ನೀಡಲಾಗಿದೆ. ಮನದೇವರು ನೀಡಿದ ಸೂಚನೆ ಕುರಿತು ಆದಿನಾಡು ಚಿಕ್ಕಮ್ಮದೇವಿ ದೇಗುಲದ ಅರ್ಚಕ ಡಾ. ಲಿಂಗಣ್ಣ ಹಲವು ಮಾಹಿತಿ ಬಹಿರಂಗಪಡಿಸಿದ್ದಾರೆ.  ಇದೀಗ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಚರ್ಚೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇತ್ತ ಸ್ಯಾಂಟ್ರೋ ರವಿ ಬಂಧನ ರಾಜ್ಯದಲ್ಲಿ ಭಾರಿ ಸಂಚಲನ ಸಷ್ಟಿಸಿದೆ. ಸ್ಯಾಂಟ್ರೋ ರವಿಯನ್ನು ಗುಜರಾತ್‌ನಲ್ಲಿ ಅಹಮ್ಮದಾಬಾದ್‌ನಲ್ಲಿ ಬಂಧಿಸಲಾಗಿದೆ. ಇತ್ತ ನಿನ್ನೆ ಗೃಹ ಸಚಿವ ಅರಗ ಜ್ಞಾನೇಂದ್ರ ಅಹಮ್ಮದಾಬಾದ್‌ನಲ್ಲಿದ್ದರು. ಗೃಹ ಸಚಿವರೇ ಸ್ಯಾಂಟ್ರೋ ರವಿಯನ್ನು ಸೇಫ್ ಮಾಡಲು ಹೋಗಿದ್ದರು ಎಂದು ವಿಪಕ್ಷಗಳು ಆರೋಪಿಸಿದೆ.