ಶಿರಾ ಮತದಾರರನ್ನು ಸೆಳೆಯಲು ವಿಜಯೇಂದ್ರರಿಂದ ಮಾಸ್ಟರ್ ಪ್ಲಾನ್

Oct 21, 2020, 3:21 PM IST

ಬೆಂಗಳೂರು (ಅ. 21): ಶಿರಾ ಉಪಚುನಾವಣಾ ಅಖಾಡ ರಂಗೇರಿದೆ. ಶಿರಾದಲ್ಲಿ ಕಮಲವನ್ನು ಅರಳಿಸುತ್ತೇವೆ ಎಂದು ಕಮಲ ಪಾಳಯ ಉತ್ಸುಕವಾಗಿದೆ. ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಶಿರಾದಲ್ಲಿ ಮೊಕ್ಕಾಂ ಹೂಡಿ ಕೆಲಸವನ್ನೂ ಮಾಡುತ್ತಿದ್ದಾರೆ. 

'ಇದು ನನ್ನೊಬ್ಬನ ಪ್ರಯತ್ನವಲ್ಲ. ನಮ್ಮ ನಾಯಕರು, ಕಾರ್ಯಕರ್ತರ ಶ್ರಮ ಇಲ್ಲಿದೆ. ಶಿರಾದಲ್ಲಿ ಹೇಗಾದರೂ ಬಿಜೆಪಿಯನ್ನು ಗೆಲ್ಲಿಸುವ ಉತ್ಸಾಹದಲ್ಲಿದ್ದೇವೆ. ಶಿರಾ ಮತದಾರರು ಕೂಡಾ ಬಿಜೆಪಿ ಕೈ ಹಿಡಿಯೋದು ಪಕ್ಕಾ' ಎಂದು ವಿಜಯೇಂದ್ರ ಹೇಳಿದ್ದಾರೆ.

ಮೀರ್ ಸಾದಿಕ್ ಎಂದ ಅಶ್ವಥ್ ನಾರಾಯಣ್‌ಗೆ ಡಿಕೆ ಶಿವಕುಮಾರ್ ತಿರುಗೇಟು... ಅಬ್ಬಬ್ಬಾ..!

 ಡಿಕೆಶಿಯವರು ಏನೇ ರಣತಂತ್ರ ರೂಪಿಸಲಿ, ನಾವು, ನಮ್ಮ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತೇವೆ. ಯಶಸ್ವಿಯೂ ಅಗುತ್ತೇವೆ ಎಂಬ ನಂಬಿಕೆ ಇದೆ' ಎಂದು ವಿಜಯೇಂದ್ರ ಹೇಳಿದ್ದಾರೆ.