Karnataka Politics: ಕಾಂಗ್ರೆಸ್‌ನ Paycm ಅಸ್ತ್ರಕ್ಕೆ ಕೇಸರಿ ಕೌಂಟರ್!

Sep 25, 2022, 3:36 PM IST

ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕೆಸರೆರಚಿಕೊಳ್ಳುತ್ತಿರುವುದು ಮುಂದುವರೆದಿದೆ. 40 ಪರ್ಸಂಟ್ ಕಮಿಷನ್ ಸರ್ಕಾರ ಎಂದು ಬಿಜೆಪಿ ಸರ್ಕಾರವನ್ನು ನಿರಂತರ ಟೀಕಿಸಲು ಶುರು ಮಾಡಿದ ಕಾಂಗ್ರೆಸ್, ನಂತರ ಪೇಟಿಎಂ  ರೀತಿ ಪೇಸಿಎಂ ಎಂದು ಸಿಎಂ ಬೊಮ್ಮಾಯಿ ಪೋಟೋದ ಬಾರ್‌ಕೋಡ್ ಮಾಡಿ ಅದನ್ನು ಎಲ್ಲೆಡೆ ಅಂಟಿಸಲು ಮುಂದಾಗಿತ್ತು. ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಡಿಕೆಶಿ ಅವರೇ ಇದರ ನೇತೃತ್ವ ವಹಿಸಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದು ಗೋಡೆಗಳಿಗೆ ಈ ಪೇಸಿಎಂ ಪೋಸ್ಟರ್‌ಗಳನ್ನು ಅಂಟಿಸಲು ಮುಂದಾಗಿ ನಂತರ ಬಂಧನಕ್ಕೊಳಗಾಗಿದ್ದರು. ಆದರೆ ಇದರ ವಿರುದ್ಧ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಭ್ರಷ್ಟಾಚಾರದ ವಿಚಾರವಾಗಿ ಜೈಲಿಗೆ ಹೋಗಿ ಬಂದವರೆ ಭ್ರಷ್ಟಾಚಾರದ ಬಗ್ಗೆ ಪೋಸ್ಟರ್ ಅಂಟಿಸುತ್ತಿರುವುದು ವಿಪರ್ಯಾಸ ಎಂದಿದ್ದಾರೆ.