ಈಗ ಸರ್ಕಾರ ಭದ್ರ, ಸೋಮಾರಿ ಸರ್ಕಾರಿ ಅಧಿಕಾರಿಗಳಿಗೆ ಕಾದಿದೆ ಸಂಕಷ್ಟ!

Dec 13, 2019, 12:30 PM IST

ಬೆಂಗಳೂರು (ಡಿ.13): ಅತಂತ್ರವಾಗಿದ್ದ ಬಿ.ಎಸ್. ಯಡಿಯೂರಪ್ಪ ಸರ್ಕಾರ, ಉಪಚುನಾವಣೆಯ ಬಳಿಕ ಸುಭದ್ರವಾಗಿದೆ. 

ಒಂದು ಕಡೆ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಜೋರಾಗಿ ನಡೆಯುತ್ತಿದೆ, ಇನ್ನೊಂದೆಡೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಿಎಂ ಮುಂದಾಗಿದ್ದಾರೆ.

ಕಳೆದ ಡಿ.05ರಂದು 15 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಬಹುಮತಕ್ಕೆ ಬಂದಿದೆ.