Dec 2, 2022, 5:02 PM IST
ಜೆಡಿಎಸ್ ಹಾಗೂ ಕಾಂಗ್ರೆಸ್'ಗೆ ಹೋಗುತ್ತೇನೆ ಎಂದು ವೈರಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ರಾಜಾಪುರ ಗ್ರಾಮದಲ್ಲಿ ಬಾಲಚಂದ್ರ ಜಾರಕಿಹೋಳಿ ಸ್ಪಷ್ಟನೆ ನೀಡಿದ್ದಾರೆ. ಮೋದಿ, ಶಾ ಇರುವ ತನಕ 10 ವರ್ಷ ಬಿಜೆಪಿಯನ್ನು ಅಲುಗಾಡಿಸಲು ಆಗುವುದಿಲ್ಲ. ಮೋದಿ ಕೇಂದ್ರದಲ್ಲಿದ್ದಾರೆ ಕೆಲಸ ಮಾಡುವುದು ನನಗೆ ಗೊತ್ತಿದೆ. ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹೈಕಮಾಂಡ್ ಶ್ರಮದಿಂದ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಅಧಿಕಾರದಲ್ಲಿದ್ದರೆ ಎಲ್ಲಾ ಕೆಲಸಗಳು ಆಗುತ್ತದೆ ಎಂದು ಹೇಳಿದರು.