ಯಾರಾಗ್ತಾರೆ ಅರಸೀಕೆರೆ ‘ಅರಸ’..ಉಲ್ಟಾ ಪಲ್ಟಾ ಲೆಕ್ಕಾಚಾರ.. ಹೇಗಿದೆ ಕ್ಷೇತ್ರದ ಟ್ರೆಂಡ್..?

May 6, 2023, 12:49 PM IST

ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹ್ಯಾಟ್ರಿಕ್‌ ಗೆಲುವು ಗಳಿಸಿದ್ದ ಕೆ.ಎಂ.ಶಿವಲಿಂಗೇಗೌಡ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹಾಗೂ ಮಾಜಿ‌ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಎನ್.ಆರ್.ಸಂತೋಷ್ ಬಿಜೆಪಿಯಿಂದ ಜೆಡಿಎಸ್‌ಗೆ ಪಕ್ಷಾಂತರ ಆಗಿದ್ದಾರೆ. ಹೀಗೆ ಪಕ್ಷದ ಮೇಲಿನ ವರ್ಚಸ್ಸಿಗಿಂತ ವ್ಯಕ್ತಿ ಮೇಲೆ ನಡೆಯುತ್ತಿರುವ ಚುನಾವಣೆ ಇದಾಗಿದೆ. ಇನ್ನು ಕೆ.ಎಂ.ಶಿವಲಿಂಗೇಗೌಡರು ವೈಯಕ್ತಿಕ ಮತಗಳ ಜೊತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ‌ ಮೇಲೆ ಕಣ್ಣಿಟ್ಟು ಚುನಾವಣೆಗೆ ಧುಮುಕಿದ್ದಾರೆ. ಇತ್ತ ಎನ್.ಆರ್.ಸಂತೋಷ್, ವೈಯಕ್ತಿಕ ಮತಗಳ ಜೊತೆಗೆ ಜೆಡಿಎಸ್ ಮತಗಳನ್ನು ನಂಬಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅಲ್ಲದೆ ಲಿಂಗಾಯುತ ಮತಗಳೇ ನಿರ್ಣಾಯಕ ಆಗಿರುವ ಕ್ಷೇತ್ರದಲ್ಲಿ ಬಿಜೆಪಿ ಜಿ.ವಿ.ಟಿ ಬಸವರಾಜ್ ಅವರನ್ನು ಕಣಕ್ಕಿಳಿಸಿದೆ.ಹಾಗಾದಾರೆ ಕಾಂಗ್ರೆಸ್ ಸೇರಿದ ಶಿವಲಿಂಗೇಗೌಡರ ‘ಕೈ’ ಹಿಡಿತಾರಾ ಮತದಾರ? ಪಕ್ಷ ತೊರೆದ ಶಿವಲಿಂಗೇಗೌಡರ ಸೋಲಿಗೆ ಜೆಡಿಎಸ್ ಶಪಥ..ಶಿವಲಿಂಗೇಗೌಡರ ವಿರುದ್ಧ ದಳಪತಿಗಳ ರಣತಂತ್ರ ಏನು?