Today Horoscope: ಈ ರಾಶಿಯವರು ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಿ..ಆದಿತ್ಯ ಹೃದಯ ಪಠಿಸಿ

Nov 3, 2023, 9:13 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಷಷ್ಠಿ ತಿಥಿ, ಆರಿದ್ರಾ ನಕ್ಷತ್ರ.

ಇಂದು ಷಷ್ಠಿ ತಿಥಿ ಇರುವುದರಿಂದ ಸುಬ್ರಹ್ಮಣ್ಯ ಸ್ವಾಮಿಯ ಕಾಲವನ್ನು ಸೂಚಿಸಿಸುತ್ತದೆ. ಈ ದಿನ ಶಿವ, ಪಾರ್ತತಿ ಸಹಿತ ಇರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋದ್ರೆ ಒಳಿತಾಗಲಿದೆ. ಮಕರ ರಾಶಿಯವರಿಗೆ ಈ ದಿನ ವೃತ್ತಿಯಲ್ಲಿ ತೊಡಕಾಗಲಿದೆ. ಕಾರ್ಯಗಳು ಅಪೂರ್ಣವಾಗಲಿವೆ. ವ್ಯಾಪಾರಿಗಳಿಗೆ ಲಾಭ ದೊರೆಯಲಿದ್ದು, ಕುಟುಂಬದಲ್ಲಿ ಬಲವಿರಲಿದೆ. ಹಿರಿಯರ ಸಹಕಾರವಿರಲಿದೆ. ಈ ರಾಶಿಯವರು ಇಂದು ಮಹಾಲಕ್ಷ್ಮೀ ಸನ್ನಿಧಾನಕ್ಕೆ ಗೋಧಿ-ಅವರೆ ದಾನ ಮಾಡಿ.  

ಇದನ್ನೂ ವೀಕ್ಷಿಸಿ:  ಮರಾಠ ನೆಲದಲ್ಲಿ "ಕನ್ನಡ ಡಿಂಡಿಮ" ಬಾರಿಸಿದ್ದ ಹೆಮ್ಮೆಯ ಕನ್ನಡಿಗ..!