Panchang: ವಿಷ್ಣುವಿಗೆ ಹೆಸರುಬೇಳೆ ಪಾಯಸ ನೈವೇದ್ಯ ಮಾಡಿ

Nov 16, 2022, 9:44 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಬುಧವಾರ, ಅಷ್ಟಮಿ ತಿಥಿ, ಆಶ್ಲೇಷ ನಕ್ಷತ್ರ.
ಬುಧವಾರ, ಅಷ್ಟಮಿ ಹಾಗೂ ಆಶ್ಲೇಷ ಒಟ್ಟಿಗೆ ಬಂದಿರುವುದು ವಿಶೇಷವಾಗಿದೆ. ವಿಷ್ಣು ಸನ್ನಿಧಾನಕ್ಕೆ ಹೆಸರುಕಾಳು ಸಮರ್ಪಣೆ ಮಾಡುವುದು ಒಳಿತು. ಇಲ್ಲವೇ ಹೆಸರುಬೇಳೆ ಪಾಯಸ ನೈವೇಧ್ಯ ಮಾಡಿಸಿ. ಕಾರ್ತಿಕ ಮಾಸವಾಗಿರುವುದರಿಂದ ವಿಷ್ಣು ದರ್ಶನ ಮಾಡಿ. ಅಷ್ಟಮಿಯಾಗಿರುವುದರಿಂದ ದುರ್ಗಾ ಪ್ರಾರ್ಥನೆ ಮಾಡಿ. ಆಶ್ಲೇಷ ನಕ್ಷತ್ರ ಇರುವುದರಿಂದ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ದಿನವಿಶೇಷದ ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ  ಇಲ್ಲಿ ತಿಳಿಯಿರಿ. 

Jealous ಇರೋ ಜನರ ನಕಾರಾತ್ಮಕ ದೃಷ್ಟಿಯಿಂದ ಬಚಾವಾಗಲು ಇಲ್ಲಿವೆ ನೋಡಿ ಎಕ್ಸ್ಪರ್ಟ್ ಅಡ್ವೈಸ್!