Today Horoscope: ಈ ದಿನದ ರಾಶಿ ಭವಿಷ್ಯ ಹೀಗಿದ್ದು.. ಇಂದು ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ

Jun 24, 2023, 10:57 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ , ಶುಕ್ಲ ಪಕ್ಷ, ಶನಿವಾರ, ಷಷ್ಠಿ ತಿಥಿ, ಪೂರ್ವ ಫಲ್ಗುಣಿ ನಕ್ಷತ್ರ. 

ಈ ದಿನ ಷಷ್ಠಿ ಇರುವುದರಿಂದ ಸ್ಕಂದನ ಆರಾಧನೆ ಮಾಡಿ. ಜೊತೆಗೆ ಸುಬ್ರಹ್ಮಣ್ಯ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸಿ. ಅಷ್ಟೋತ್ತರ ಸೇವೆಯನ್ನು ಮಾಡಿಸಿ, ಇದರಿಂದ ಸ್ವಾಮಿ ಸಂತೃಪ್ತನಾಗುತ್ತಾನೆ. ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನದಲ್ಲಿ ಜೇನಿನ ಅಭಿಷೇಕವನ್ನೂ ಮಾಡಿಸಬಹುದು. ಇಂದು ಬುಧ ಮಿಥುನ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಆತ ಬುದ್ಧಿವಂತಿಕೆ ಮೇಲೆ ಪ್ರಭಾವ ಬೀರುತ್ತಾನೆ.

ಇದನ್ನೂ ವೀಕ್ಷಿಸಿ: ಮಕ್ಕಳ ಬಳಿ ಮಾತನಾಡುವಾಗ ಎಚ್ಚರ..ಡಿಮೋಟಿವೇಟ್‌ ಮಾಡಬೇಡಿ