ಇಂದಿನ ರಾಶಿ ಭವಿಷ್ಯ: ಈ ದಿನ ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗ್ರತೆ ವಹಿಸಿ, ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಿ

Jun 1, 2023, 9:38 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಗುರುವಾರ, ದ್ವಾದಶಿ ತಿಥಿ, ಸ್ವಾತಿ ನಕ್ಷತ್ರ.

ಸ್ವಾತಿ ನಕ್ಷತ್ರ ದಿನ ವಸ್ತುಗಳನ್ನು ಕಳೆದುಕೊಂಡರೇ ಸಿಗುವುದು ಕಷ್ಟ. ಹಾಗಾಗಿ ವಸ್ತುಗಳು ಮತ್ತು ಕಡತಗಳ ಬಗ್ಗೆ ಜಾಗ್ರತೆವಹಿಸಿ. ಈ ದಿನ ನರಸಿಂಹ ಸ್ವಾಮಿ ಪ್ರಾರ್ಥನೆ ಮಾಡಬಹುದು. ಅಲ್ಲಿ ತುಳಸಿ ಅರ್ಚನೆ ಮಾಡಿಸಿ. ಸಾಲಬಾಧೆ, ದಾಂಪತ್ಯದಲ್ಲಿ ಕಲಹ ಇದ್ದರೂ ನಿವಾರಣೆಯಾಗುತ್ತದೆ. ಈ ದಿನ ನರಸಿಂಹ ಸ್ವಾಮಿ ಜೊತೆ ಉಮಾಮಹೇಶ್ವರಿ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ಕಾಂಗ್ರೆಸ್ ಉಚಿತ ಗ್ಯಾರೆಂಟಿ ತಲೆನೋವು, ಗೃಹ ಲಕ್ಷ್ಮೀ ಯೋಜನೆ ಅತ್ತೆಗಾ? ಸೊಸೆಗಾ?