Rashibhavishy: ಈ ದಿನದ ನಿಮ್ಮ ರಾಶಿ ಭವಿಷ್ಯ ಹೀಗಿದ್ದು, ಲಲಿತಾ ಪರಮೇಶ್ವರಿ ಆರಾಧನೆಯನ್ನು ಮಾಡಿ..

Jul 7, 2023, 8:44 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಚತುರ್ಥಿ-ಪಂಚಮಿ ತಿಥಿ, ಶತಭಿಷ ನಕ್ಷತ್ರ.

ಈ ದಿನ ಪಂಚಮಿ ಇರುವುದರಿಂದ ಶುಭ ದಿನವಾಗಿದೆ. ಇಂದು ಲಲಿತಾ ಪರಮೇಶ್ವರಿಗೆ ಪಾಯಸವನ್ನು ಮಾಡಿ, ತುಪ್ಪದ ದೀಪ ಹಚ್ಚಿ. ಆಷಾಢದಲ್ಲಿ ಪ್ರಕೃತಿ ಲಕ್ಷ್ಮೀಯ ಆರಾಧನೆಯನ್ನು ಮಾಡಿ. ಸಮೃದ್ಧ ಮಳೆ, ಬೆಳೆಗಾಗಿ ಆಕೆಯನ್ನು ಪ್ರಾರ್ಥಿಸಿ. 

ಇದನ್ನೂ ವೀಕ್ಷಿಸಿ:  News Hour: ಸದನದಲ್ಲಿ ಕುಮಾರಸ್ವಾಮಿ ಜಮದಗ್ನಿ, ಕಂಪಿಸಿದ ಕಾಂಗ್ರೆಸ್‌ ಪಾಳಯ!