ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ಸಪ್ತಮಿ ತಿಥಿ, ಚಿತ್ತಾ ನಕ್ಷತ್ರ.
ಇಂದು ಮಂಗಳವಾರ ಆಗಿರುವುದರಿಂದ ಅಮ್ಮನವರ ಸನ್ನಿಧಿಯಲ್ಲಿ ಅಥವಾ ಮನೆಯಲ್ಲೇ ತುಪ್ಪದ ದೀಪ ಹಚ್ಚಿ. ಈ ದಿನ ಮಿಥುನ ರಾಶಿಯಲ್ಲಿ ಚಂದ್ರನಿದ್ದಾನೆ. ಈ ಜಾತಕದ ಪುರುಷರು ಸ್ತ್ರೀಯರ ಮನಸ್ಸನ್ನು ತುಂಬಾ ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಸ್ತ್ರೀಯರು ಆದ್ರೆ, ಚಾಣಕ್ಷತನ ಅವರಲ್ಲಿ ಇರುತ್ತದೆ. ತಾಯಿಯ ಮನಸ್ಸು ಅವರಲ್ಲಿರುತ್ತದೆ. ಸಂಧಾನವನ್ನು ಮಾಡಲು ಅವರು ಯೋಗ್ಯರಾಗಿರುತ್ತಾರೆ.
ಇದನ್ನೂ ವೀಕ್ಷಿಸಿ: News Hour: ಗ್ಯಾರಂಟಿ ಸರ್ಕಾರಕ್ಕೆ ಸ್ಕೆಚ್ ಹಾಕ್ತಿರೋರು ಯಾರು?