Sep 29, 2019, 9:44 PM IST
ಧುಬಾರಿ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ಜೋರಾಗಿ ಹೋಗುತ್ತಿತ್ತು. ಗಜರಾಜ ಸಹ ಅದೇ ಮಾರ್ಗವಾಗಿ ಬರುತ್ತಿದ್ದ. ಭಾನುವಾರ ಮುಂಜಾನೆ ನಡೆಯಬಹುದಾಗಿದ್ದ ಅವಘಡದ ಸೂಚನೆ ಯಾರಿಗೂ ಇರಲಿಲ್ಲ. ಪಶ್ಚಿಮ ಬಂಗಾಳದ ಬನಾರತ್-ನಾಗ್ರಕತಾ ಮಾರ್ಗ ಮಧ್ಯೆ ಘೋರ ಅವಘಡ ಸಂಭವಿಸಿಯೇ ಹೋಯಿತು. ವಿಹರಿಸುತ್ತಿದ್ದ ಆನೆಗೆ ರೈಲು ಡಿಕ್ಕಿಯಾಯಿತು. ಗಂಭೀರ ಗಾಯಗೊಂಡ ಗಜರಾಜನ ಕಣ್ಣೀರು ಮಾತ್ರ ಹೇಳಲು ಅಸಾಧ್ಯ. ನೋವು ತಾಳಲಾರದೆ ಆನೆ ಪ್ರಾಣವನ್ನು ಬಿಟ್ಟಿತು.