May 14, 2019, 2:50 PM IST
ಕುಂದಗೋಳ ಉಪ-ಚುನಾವಣೆ ಪ್ರಚಾರ ನಿಮಿತ್ತ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಹುಬ್ಬಳ್ಳಿ ಖಾಸಗಿ ಹೋಟೆಲ್ ತಂಗಿದ್ದಾರೆ. ವಿಶೇಷವೆಂದರೆ, ಅವರಿಬ್ಬರು ಪರಸ್ಪರ ಭೇಟಿಯಾಗದೇ ದೂರವುಳಿದಿದ್ದಾರೆ. ಮೈತ್ರಿ ನಾಯಕರ ನಡುವೆ ನಡೆಯುತ್ತಿರುವ ವಾಕ್ಸಮರ ಈಗ ಸಿದ್ದರಾಮಯ್ಯ Vs ಎಚ್ ಡಿಕೆ ಆಗಿದೆಯಾ? ಎಂಬ ಅನುಮಾನ ಹುಟ್ಟುಹಾಕಿದೆ.