ದೇವೇಗೌಡ್ರ ಮಧ್ಯಂತರ ಚುನಾವಣಾ ತಂತ್ರಕ್ಕೆ ಸಿದ್ದರಾಮಯ್ಯ ಹಳೆ ಮಂತ್ರ!

Jun 24, 2019, 5:00 PM IST

ಬೆಂಗಳೂರು (ಜೂ.24): ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯೋದು ಪಕ್ಕಾ? ಇತ್ತೀಚೆಗೆ ದೇವೇಗೌಡರು ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಗ್ಗೆ ಸುಳಿವು ನೀಡಿದ್ದೇ ಸರಿ, ಅದರ ಬೆನ್ನಲ್ಲೇ ಸಿದ್ದರಾಮಯ್ಯ ಹಳೆ ಮಂತ್ರವನ್ನು ಪಠಿಸಲಾರಂಭಿಸಿದ್ದಾರೆ. 

ತಮ್ಮ ಬೆಂಬಲಿಗರೊಂದಿಗೆ ಕಳೆದೆರಡು ದಿನಗಳಿಂದ ಮ್ಯಾರಥಾನ್ ಸಭೆಗಳನ್ನು ಸಿದ್ದರಾಮಯ್ಯ ನಡೆಸುತ್ತಿದ್ದಾರೆ. ದೇವೇಗೌಡರ ’ಮಧ್ಯಂತರ ಚುನಾವಣೆ’ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಅಲರ್ಟ್ ಆಗಿದ್ದು, ಆಪ್ತರೊಂದಿಗೆ ಸೇರಿ ರಣತಂತ್ರ ಹೆಣೆಯುತ್ತಿದ್ದಾರೆ.

ಜೆಡಿಎಸ್ ಜೊತೆಗಿನ ಮೈತ್ರಿ ಮತ್ತು ಲೋಕಸಭೆ ಚುನಾವಣಾ ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ಅಭಿಪ್ರಾಯ ಹಾಗೂ ಅದಕ್ಕೆ ದೇವೇಗೌಡರ ಪ್ರತಿಕ್ರಿಯೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟು ಹಾಕಿದೆ.