ಹೈಕಮಾಂಡ್‌ನಿಂದ ಹೊಸ ವಿಘ್ನ; ಸಿದ್ದರಾಮಯ್ಯ ವಿಪಕ್ಷ ನಾಯಕ ಕನಸು ಭಗ್ನ?

Oct 7, 2019, 12:57 PM IST

ಬೆಂಗಳೂರು (ಅ.07): ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ನಡುವೆ ಹಗ್ಗಜಗ್ಗಾಟ ಜೋರಾಗಿದೆ. ವಿಪಕ್ಷ ನಾಯಕ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಹಿರಿಯ ನಾಯಕ ಎಚ್.ಕೆ. ಪಾಟೀಲ್ ತೀವ್ರ ಲಾಬಿ ನಡೆಸುತ್ತಿದ್ದಾರೆ.

ಹೈಕಮಾಂಡ್‌ ಕೂಡಾ ಮದ್ಯಪ್ರವೇಶ ಮಾಡಿದ್ದು ಶಾಸಕರ ಅಭಿಪ್ರಾಯ ಸಂಗ್ರಹಿಸಿದೆ. ಬಹುತೇಕ ಶಾಸಕರು ಪರ ಇದ್ದರೂ, ಸಿದ್ದರಾಮಯ್ಯಗೆ ಈ ಸ್ಥಾನ ಸಿಗೋದು ಅಷ್ಟು ಸುಲಭವಲ್ಲ! ವಿಪಕ್ಷ ನಾಯಕ ಸ್ಥಾನದ ಕನಸು ಕಂಡಿದ್ದ  ಸಿದ್ದರಾಮಯ್ಯ ಬಣಕ್ಕೆ ಹೈಕಮಾಂಡ್ ಶಾಕ್ ನೀಡಿದೆ. 

ವರಿಷ್ಠರು ವಿಧಿಸಿರುವ ಹೊಸ ಶರತ್ತು ಸಿದ್ದರಾಮಯ್ಯ ಮತ್ತು ಬೆಂಬಲಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇಲ್ಲಿದೆ ವಿವರ...