ಅಯ್ಯೋ ಇದೇನು? ಇನ್ನಿಂಗ್ಸ್ ಶುರುವಾಗೋ ಮುನ್ನ ಬಿಜೆಪಿಗೆ ತಲೆನೋವು ತಂದ ಅತೃಪ್ತರು!

Jul 11, 2019, 2:33 PM IST

ಬೆಂಗಳೂರು (ಜು.11): ರಾಜ್ಯ ರಾಜಕೀಯ ಗೊಂದಲದ ಗೂಡಾಗಿದೆ. ಶಾಸಕರ ರಾಜೀನಾಮೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ರಾಜೀನಾಮೆ ನೀಡಿ ಬಂಡಾಯವೆದ್ದಿರುವ ಶಾಸಕರು, ಕಾಂಗ್ರೆಸ್‌ನಲ್ಲೇ ಇದ್ದೇವೆ, ಜೆಡಿಎಸ್‌ನಲ್ಲೇ ಇದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.  ಆದರೆ, ಇತ್ತ ಬಿಜೆಪಿಗೆ ಮತ್ತೊಂದು ತಲೆನೋವು ಶುರುವಾಗಿದೆ.