‘ಮೂರು ದಿನಗಳಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ’

Jul 29, 2019, 9:29 PM IST

ಬೆಂಗಳೂರು (ಜು.29): ಮುಂಬೈನಿಂದ ನಗರಕ್ಕೆ ವಾಪಾಸಾಗಿರುವ ಅನರ್ಹ ಶಾಸಕರು, ಕಾಂಗ್ರೆಸ್- ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೊಸಕೋಟೆ ‘ಅನರ್ಹ’ ಶಾಸಕ ಎಂ.ಟಿ.ಬಿ. ನಾಗರಾಜ್, ಆಪರೇಷನ್ ಕಮಲ ಆರೋಪವನ್ನು ತಳ್ಳಿಹಾಕಿದ್ದಾರೆ. ಇದೇ ವೇಳೆ, ನಾವು ಸಿಎಂಗೆ ಕೊಟ್ಟ ಒಂದೇ ಒಂದು ಪತ್ರವನ್ನೂ ಅಧಿಕಾರಿಗಳು ವರ್ಗಾವಣೆ ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ವಿರುದ್ಧ ಕಿಡಿಕಾರಿದರು.