’ಪಕ್ಷದಲ್ಲಿ ಚರ್ಚೆಯಾಗದೇ ಇದ್ದಿದ್ದರೆ ಬಾಯಲ್ಲಿ ಈ ಮಾತು ಬರ್ತಿರ್ಲಿಲ್ಲ’

Mar 2, 2019, 4:28 PM IST

ಪಾಕಿಸ್ತಾನ ಗಡಿ ದಾಟಿದ ವಾಯುಸೇನೆಯಿಂದ ಉಗ್ರರ ನೆಲೆ ಧ್ವಂಸ ಮಾಡಿದ್ದು, ದೇಶದೆಲ್ಲೆಡೆ ಮೋದಿ ಅಲೆ ಎದ್ದಿದೆ. ಇದು ನಮಗೆ ಲೋಕಸಭಾ ಚುನಾವಣೆಯಲ್ಲಿ 22ಕ್ಕೂ ಹೆಚ್ಚು ಸೀಟು ಗೆಲ್ಲಲು ಅನುಕೂಲ ಮಾಡಿಕೊಡುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಭಾರೀ ಚರ್ಚೆ ಹುಟ್ಟುಹಾಕಿದ್ದರು. ಬಳಿಕ ಯಡಿಯೂರಪ್ಪ ಅದಕ್ಕೆ ಸ್ಪಷ್ಟೀಕರಣವನ್ನೂ  ನೀಡಿದ್ದರು. ಆದರೆ, ಬಿಜೆಪಿಯ ಈ ಧೊರಣೆಗೆ ಕಾಂಗ್ರೆಸ್ ನಾಯಕರು ಹೊಸ ಸವಾಲನ್ನೆಸೆದಿದ್ದಾರೆ. ಪಕ್ಷದಲ್ಲಿ ಚರ್ಚೆಯಾಗದೇ ಇದಿದ್ದರೆ ಬಾಯಲ್ಲಿ ಈ ಮಾತು ಬರ್ತಿರ್ಲಿಲ್ಲ, ಎಂದು ಅವರು ಅರೋಪಿಸಿದ್ದಾರೆ.