'ಎಮೋಶನಲ್ ವಿಚಾರ ವರ್ಕ್ ಆಗಲ್ಲ, ಜನರಿಗೆ ತಿಳಿವಳಿಕೆ ಬಂದಿದೆ'

Oct 24, 2019, 8:04 PM IST

ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣಾ ಫಲಿತಾಂಶ ಒಂದೊಂದಾಗಿ ಪ್ರಕಟವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಸರ್ಕಾರ ರಚಿಸುವುದು ಪಕ್ಕಾ ಆಗಿದ್ದರೆ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ.

ಎಮೋಶನಲ್ ಇಶ್ಯೂ ಇಟ್ಟುಕೊಂಡರೆ ಮತ ನೀಡುತ್ತಾರೆ ಎಂಬಂತೆ ಬಿಜೆಪಿಯವರು ನಡೆದುಕೊಳ್ಳುತ್ತಿದ್ದರು. ಆದರೆ ಜನ ಈಗ ನಿಧಾನಕ್ಕೆ ಅದನ್ನು ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.