ಮಹಾಲಕ್ಷ್ಮಿ ಲೇಔಟ್‌ನ ಜನಮೆಚ್ಚಿದ ಕಾರ್ಪೊರೇಟರ್ ಎಂ ಶಿವರಾಜು

Jun 11, 2020, 5:47 PM IST

ಬೆಂಗಳೂರು(ಜೂ.11): ನಗರದ ಮಹಾಲಕ್ಷ್ಮಿ ಲೇ ಔಟ್ ಪಾಲಿನ ಬಡವರ ಬಂದು, ಯುವ ರಾಜಕಾರಣಿ ಎಂ ಶಿವರಾಜು. ಕೊರೋನಾ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನತೆಗೆ ಶಿವರಾಜಣ್ಣ ಆಸರೆಯಾಗಿ ನಿಂತಿದ್ದಾರೆ. ಅವರ ಕೆಲಸಕ್ಕೆ ಕ್ಷೇತ್ರದ ಜನ ಫಿದಾ ಆಗಿ ಹೋಗಿದ್ದಾರೆ.

ಜನರು ಕಷ್ಟ ಅಂತ ಹೇಳಿಕೊಂಡು ಬಂದರೆ ಸಾಕು ಶಿವರಾಜು ಕರಗಿ ಬಿಡುತ್ತಾರೆ. ಬಡವರ ಕಷ್ಟಗಳಿಗೆ ಸ್ಪಂದಿಸಿ ಮನೆಮಗನಂತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಬಿಡುತ್ತಾರೆ ಶಿವರಾಜು. ಬರೀ ರಾಜಕೀಯ ಮಾತ್ರವಲ್ಲ, ಸಮಾಜ ಸೇವೆಗೂ ಶಿವರಾಜು ಜೈ ಎಂದಿದ್ದಾರೆ.

ಕುತೂಹಲ ಮೂಡಿಸಿದ ಸಿಎಂ-ವಿನಯ್ ಗುರೂಜಿ ಭೇಟಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ, ಕಾಂಗ್ರೆಸ್ ಯುವ ಮುಖಂಡ ಎಂ. ಶಿವರಾಜು ಅವರ ಜನಪರ ಕಾಳಜಿಯ ಕುರಿತಾದ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.