‘ಸಿದ್ದರಾಮಯ್ಯರೇ ನಮ್ಮ ನಾಯಕ’ ಕೊನೆಗೂ ಮಾಧ್ಯಮ ಮುಂದೆ ಬಂದ ರಮೇಶ್ ಜಾರಕಿಹೊಳಿ ಹೇಳಿಕೆ!

Jul 10, 2019, 1:58 PM IST

ಮುಂಬೈ (ಜು.10): ಹೋಟೆಲ್ ಒಳಗಡೆ ಬಂಡಾಯ ಶಾಸಕರು, ಹೋಟೆಲ್ ಹೊರಗಡೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್. ಭೇಟಿಯಾಗಿಯೇ ಹೋಗ್ತೀನಿ ಎಂದು ಡಿಕೆಶಿ ಹಟ, ಭೇಟಿಯಾಗೋದೇ ಇಲ್ಲ ಎಂದು ಶಾಸಕರ ಪಟ್ಟು. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ.