ಬೆಂಗಳೂರು: ಗಾಂಧಿ ಸಂಕಲ್ಪ ಯಾತ್ರೆಗೆ ರಾಜೀವ್ ಚಂದ್ರಶೇಖರ್ ಚಾಲನೆ

Oct 3, 2019, 6:44 PM IST

ಬೆಂಗಳೂರು[ಅ. 03]  ಏಕ ಬಳಕೆ ಪ್ಲಾಸ್ಟಿಕ್ ಗೆ ಸಂಪೂರ್ಣ ವಿದಾಯ ಹೇಳಲು ಪ್ರಧಾನಿ ನರೇಂದ್ರ ಮೋದಿ ಇಡಿ ದೇಶದ ಸಂಕಲ್ಪ ಕೋರಿದ್ದಾರೆ.  ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಿಜೆಪಿ ದೇಶಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ‘ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿದ್ದಾರೆ. ಗಾಂಧಿ ಸಂಕಲ್ಪ ಯಾತ್ರೆಗೆ ಗುರುವಾರ ಬೆಂಗಳೂರಿನಲ್ಲಿ ಸಂಸದ ಪಿಸಿ ಮೋಹನ್ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಚಾಲನೆ ನೀಡಿದರು.

ರಾಜೀವ್ ಚಂದ್ರಶೇಖರ್ ಅವರ ಜತೆಗೆ ಬಿಜೆಪಿ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಸಂಕಲ್ಪತೊಟ್ಟರು. ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ 'ಸ್ವಚ್ಛತಾ ಹೈ ಸೇವಾ' ಕೈಂಕರ್ಯಕ್ಕೆ ಸಿದ್ಧರಾದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕನಸಲ್ಲಿ ಒಂದಾದ ಸ್ವಚ್ಛ ಭಾರತದ ಪರಿಕಲ್ಪನೆಯ ಮುಂದುವರಿದ ಭಾಗವೇ ಸಂಕಲ್ಪ ಯಾತ್ರೆ. ಶುಚಿತ್ವ, ಸರಳತೆ, ಖಾದಿ ಮತ್ತು ಶಾಂತಿ ಆಧಾರದಲ್ಲಿಯೇ  ಅಭಿಯಾನ ಮುಂದುವರಿಯಲಿದೆ.

ಇಂಗ್ಲಿಷ್ ನಲ್ಲಿಯೂ ಓದಿ