ಅಂತೂ ರಾಜ್ಯ ಸಂಪುಟ ವಿಸ್ತರಣೆಗೆ ಅಸ್ತು ಎಂದ ಸಿಎಂ!: ಯಾರಿಗೆಲ್ಲ ಮಂತ್ರಿ ಪಟ್ಟ?

Jun 8, 2019, 1:40 PM IST

ಬೆಂಗಳೂರು[ಜೂ.08]: ಶಾಸಕರ ಅತೃಪ್ತಿ ತಡೆಯಲು ಸರ್ಕಾರದ ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಸಂಪುಟ ವಿಸ್ತರಣೆಗೆ ಮುಂದಾಗಿದೆ. ಸಿಎಂ ಕುಮಾರಸ್ವಾಮಿ ಸಂಪುಟ ವಿಸ್ತರಣೆಗೆ ಅಸ್ತು ಎಂದಿದ್ದು, ಬುಧವಾರದಂದು ಮುಹೂರ್ತ ಫಿಕ್ಸ್ ಆಗಿದೆ. ಲಭ್ಯವಾದ ಮಾಹಿತಿ ಅನ್ವಯ ಪಕ್ಷೇತರ ಶಾಸಕರಾದ ನಾಗೇಶ ಮತ್ತು ಶಂಕರ್ಗೆ ಸಚಿವ ಸ್ಥಾನ ಖಚಿತ ಎನ್ನಲಾಗಿದೆ. ಅದರೆ ಕಾಂಗ್ರೆಸ್ ಪಾಲಿನ ಸಚಿವ ಸ್ಥಾನಕ್ಕೆ ಯಾರಿಗೆ ಎನ್ನುವುದೇ ಗೌಪ್ಯವಾಗಿಡಲಾಗಿದೆ. ಕಾಂಗ್ರೆಸ್ ನಿಂದ  ಹಿಂದುಳಿದವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.