ಸಿಲಿಕಾನ್‌ ಸಿಟಿ ಮೇಲೆ ಉಗ್ರರ ಕರಿನೆರಳು..!

Sep 10, 2019, 3:33 PM IST

ಭಾರತಕ್ಕೆ ಉಗ್ರರು ನುಸುಳಿರುವ ಬಗ್ಗೆ ಸೇನೆಗೆ ಸಾಕ್ಷ್ಯ ಸಮೇತ ಮಾಹಿತಿ ಲಭ್ಯವಾಗಿರುವ ಬೆನ್ನಲ್ಲೇ ಇದೀಗ ಬೆಂಗಳೂರಿಗೆ ಉಗ್ರ ದಾಳಿಯ ಆತಂಕ ಶುರುವಾಗಿದೆ. ದಕ್ಷಿಣ ಭಾರತವನ್ನೇ ಟಾರ್ಗೆಟ್ ಮಾಡಲಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಉಗ್ರರು ಬೀಡು ಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ರಾಮನಗರದಲ್ಲಿ JBM ಉಗ್ರ ಸಿಕ್ಕಿಬಿದ್ದಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದೆ. ಆಂತರಿಕ ಭದ್ರತಾ ವಿಭಾಗ, ಗುಪ್ತಚರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ್ದಾರೆ.