Apr 17, 2020, 12:04 PM IST
ಕಲಬುರಗಿ(ಏ.17): ಲಾಕ್ಡೌನ್ ನಡುವೆ ನಿನ್ನೆ(ಗುರುವಾರ) ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ನಡೆದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನ ಅಮಾನತ್ತುಗೊಳಿಸಲಾಗಿದೆ.
ಬೆಂಗಳೂರಿಗಿಂತ ಮೈಸೂರೇ ಡೇಂಜರ್; ಸಾಂಸ್ಕೃತಿಕ ನಗರಿಗೀಗ ಹೆಚ್ಚಿನ ಭದ್ರತೆ
ವಾಡಿ ಪಿಎಸ್ಐ ವಿಜಯ್ಕುಮಾರ್ ಬಾವಡಿ ಹಾಗೂ ಚಿತ್ತಾಪೂರ ಸಿಡಿಪಿಓ ರಾಜಕುಮಾರ ರಾಠೋಡ್ ಅವರು ಸಸ್ಪೆಂಡ್ ಆಗಿದ್ದಾರೆ. ದೇವಸ್ಥಾನ ಕಮಿಟಿ ಸೇರಿದಂತೆ 40ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.