ಲಾಕ್‌ಡೌನ್‌ ಎಫೆಕ್ಟ್‌: ಮಗು ನೋಡೋ ಅಸೆಗೆ ನದಿಯಲ್ಲಿ ಈಜಿ ಈಜಿ ಪ್ರಾಣ ಬಿಟ್ಟ ತಂದೆ

Apr 9, 2020, 2:32 PM IST

ವಿಜಯಪುರ(ಏ.09): ಪತ್ನಿ, ಮಗು ನೋಡುವ ಆಸೆಗೆ ಕೆಎಸ್‌ಆರ್‌ಟಿಸಿ ಕಂಡಕ್ಟರ್‌ವೊಬ್ಬರು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ. ಮಲ್ಲಪ್ಪ ಎಂಬುವರೇ ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದಾರೆ. 

ಲಾಕ್‌ಡೌನ್‌ ಇದ್ರೂ ಹೇಗಿದೆ ವಿಜಯಪುರ ಪರಿಸ್ಥಿತಿ..?: ಸುವರ್ಣ ನ್ಯೂಸ್‌ ರಿಯಾಲಿಟಿ ಚೆಕ್‌ಗೆ ಶಾಸಕರ ಸಾಥ್‌

ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಗ್ರಾಮಕ್ಕೆ ತೆರಳಲು ಬಿಡವುದಿಲ್ಲ ಎಂದು ಕೃಷ್ಣಾ ನದಿಯಲ್ಲಿ ಈಜಿ ದಡ ಸೇರರೋದಕ್ಕೆ ಮಲ್ಲಪ್ಪ ಯೋಚಿಸಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಈಜಿ ಈಜಿ ನದಿಯಲ್ಲೇ ಪ್ರಾಣಬಿಟ್ಟಿದ್ದಾರೆ. ಪತ್ನಿ, ಮಗು ನೋಡದೇ ಮಲ್ಲಪ್ಪ ಅವರು ಕಣ್ಣು ಮುಚ್ಚಿದ್ದು ಮಾತ್ರ ವಿಪರ್ಯಾಸ.