ವರ್ತಿಕಾ-ನಿತಿನ್ ಪ್ರಕರಣದಲ್ಲಿ ಕೇಳಿಬಂದ ದರ್ಶನ್‌ ಗೌಡ ಯಾರು?

Sep 4, 2021, 6:50 PM IST

ಬೆಂಗಳೂರು(ಸೆ. 04)  ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.  ನಿತಿನ್ ಜತೆ ಸೇರಿ ದರ್ಶನ್ ಎಂಬುವರು ನನ್ನ ಜತೆ ಕುತಂತ್ರ ಮಾಡಿದ್ದಾರೆ. ನನ್ನ ತೇಜೋವಧೆಗೆ ದರ್ಶನ್ ಗೌಡ ಯತ್ನ ಮಾಡಿದ್ದಾರೆ. ನನ್ನ ವಿರುದ್ಧ ಹೇಳಿಕೆ ನೀಡದಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ ಎಂದು ಹೇಳಿದ್ದಾರೆ.

ಗಂಡ-ಹೆಂಡತಿ ಜಗಳದಲ್ಲಿ ಐಎಎಸ್ ಅಧಿಕಾರಿ ಜೀವ ಹೋಯ್ತಾ?

ಕೋರ್ಟ್ ನಲ್ಲಿ ನನಗೆ ನ್ಯಾಯ ಸಿಗಲಿದೆ. ವರ್ತಿಕಾ ಕಟಿಯಾರ್ ಕುಟುಂಬದ ನಡುವಿನ ಗೊಂದನ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಐಎಎಸ್ ಅಧಿಕಾರಿ ಸಾವಿನಲ್ಲಿ ನನ್ನ ಪತ್ನಿ ಪಾತ್ರವಿದೆ ಎಂದು ವರ್ತಿಕಾ ಪತಿ ನಿತಿನ ಆರೋಪಿಸಿದ್ದರು. ಇದಕ್ಕೆ ತಿರುಗೇಟು ಕೊಟ್ಟಿದ್ದ ವರ್ತಿಕಾ ಪತಿ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದರು.