ಅಪಘಾತ ಗಾಯಾಳುಗಳಿಗೆ ‘ಶ್ರೀರಾಮ’ ರಕ್ಷೆ; ಆರೋಗ್ಯ ಸಚಿವರಿಗೆ ಜನ ಪ್ರಶಂಸೆ

Sep 28, 2019, 5:45 PM IST

ಉಡುಪಿ (ಸೆ.28): ಅಪಘಾತದ ಗಾಯಾಳುಗಳನ್ನು ಅಸ್ಪತ್ರೆಗೆ ದಾಖಲಿಸುವ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ಮಾನವೀಯತೆ ಮೆರೆದರು. 

ಸಚಿವರು ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಪ್ರಯಾಣಿಕರಿದ್ದ ರಿಕ್ಷಾವೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿತ್ತು. ಅದನ್ನು ಗಮನಿಸಿದ ಶ್ರೀರಾಮುಲು ಮತ್ತು ಶಾಸಕ ರಘುಪತಿ ಭಟ್ ತಮ್ಮ ವಾಹನವನ್ನು ನಿಲ್ಲಿಸಿ ಕೂಡಲೇ ಸ್ಥಳಕ್ಕೆ ಧಾವಿಸಿದರು.

ಗಾಯಗೊಂಡಿದ್ದ ಮೂವರು ಪ್ರಯಾಣಿಕರಿಗೆ ನೀರು ಕುಡಿಸಿ ಸಮಾಧಾನಪಡಿಸಿದರು. ಅಷ್ಟೇ ಅಲ್ಲ, ಶ್ರೀರಾಮುಲು ಗಾಯಾಳುಗಳನ್ನು ತಾನೇ ಎತ್ತಿ ಕಾರಿನಲ್ಲಿ ಕೂರಿಸಿದರು. ಸಚಿವರ ಸರಳತೆಗೆ  ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. 

ಇದನ್ನೂ ಓದಿ: ಕೆಲಸ ನಿರ್ವಹಿಸದ ವೈದ್ಯರು ತೊಲಗಿ: ಆರೋಗ್ಯ ಸಚಿವರ ಖಡಕ್ ವಾರ್ನಿಂಗ್...