Video: 10 ಸಾವಿರ ಕೊಟ್ಟಿದ್ದೇ ಜಾಸ್ತಿ ಎಂದ ಈಶ್ವರಪ್ಪರನ್ನ ಹಿಗ್ಗಾಮುಗ್ಗಾ ಬೈಯ್ದು ಓಡಿಸಿದ ಸಂತ್ರಸ್ತರು

Sep 7, 2019, 9:09 PM IST

ಬೆಳಗಾವಿ, [ಸೆ.07] : ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರ ಬದುಕು ಬೀದಿಗೆ ಬಿದ್ದಿದೆ.  ನೆರೆ ಸಂತ್ರಸ್ತರು ಸರ್ಕಾರದಿಂದ ಪರಿಹಾರ ಕೋರುತ್ತಿದ್ದಾರೆ. ಆದರೆ ಇಂದು ಚಿಕ್ಕೋಡಿಗೆ ಭೇಟಿ ನೀಡಿದ್ದ ಸಚಿವ ಈಶ್ವರಪ್ಪ, ಪ್ರವಾಹ ಸಂತ್ರಸ್ತರ ಮೇಲೆ ಉದ್ದಟತನ ತೋರಿದ್ದಾರೆ. ಇದರಿಂದ ಆಕ್ರೋಶಗೊಂಡ ಚಿಕ್ಕೋಡಿಯ ಯಡೂರು ಗ್ರಾಮದ ಜನರು ಈಶ್ವರಪ್ಪಗೆ ಹಿಗ್ಗಾಮುಗ್ಗಾ ಬೈಯ್ದು, ಮಂಗಳಾರತಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿದ್ದಾರೆ. ಜನರ ಆಕ್ರೋಶ ನೋಡಿದ ಸಚಿವ ಈಶ್ವರಪ್ಪ ಚಿಕ್ಕೋಡಿಯಿಂದ ಕಾಲ್ಕಿತ್ತಿದ್ದಾರೆ.