Feb 9, 2022, 8:20 PM IST
ಬೆಂಗಳೂರು(ಫೆ. 09) ಝೀರೊ ಟ್ರಾಫಿಕ್(Zero Traffic) ಬೇಡ ಅಂದಿದ್ದ ಸಿಎಂ (Basavaraj Bommai) ಸಾಹೇಬರ ನಡೆಯನ್ನು ಮತ್ತೆ ಪ್ರಶ್ನಿಸುವಂತಾಗಿದೆ. ಸಿಎಂ ನಡೆಗೆ ಮಹಿಳೆಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಪ್ರಮಾಣ ವಚನ ಸಂದರ್ಭ ಶಶಿಕಲಾ ಜೊಲ್ಲೆಗೆ ಝೀರೋ ಟ್ರಾಫಿಕ್
ವಿಐಪಿಗಳ ಮೂವ್ ಮೆಂಟ್ ಗಾಗಿ ಈ ರೀತಿ ಮಾಡೋದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಸಿಎಂ ಕಾನ್ವೆ ಬಳಿ ಅಡ್ಡ ಬಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋರ್ಟ್ ಗೆ ಹೋಗ್ಬೇಕು ಕೇಸ್ ಅಟೆಂಡ್ ಆಗ್ಬೇಕು . ನೀವು ಕೇಸ್ ಅಟೆಂಡ್ ಆಗ್ತೀರ ಅಂತಾ ಟ್ರಾಫಿಕ್ ಪೊಲೀಸ್ರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ನಾವು ಆಸ್ಪತ್ರೆಗೆ ಹೋಗ್ಬೇಕು ಬಿಡ್ರಿ ಅಂತ ಮತ್ತಿಬ್ಬರು ಕೇಳಿದ್ದಾರೆ ಒಂದೇ ಸಮನೆ ಹಾರನ್ ಹೊಡೆದು ಟ್ರಾಫಿಕ್ ಪೊಲೀಸ್ರ ಜೊತೆ ಜನ ವಾಗ್ವಾದಕ್ಕೆ ಇಳಿದಿದ್ದರು. ವಿಧಾನಸೌಧಕ್ಕೆ ಸಿಎಂ ಹೋಗುವಾಗ ರಸ್ತೆ ವೆಹಿಕಲ್ ತಡೆದಿದ್ದ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು .