Mar 12, 2022, 5:52 PM IST
ಉತ್ತರಪ್ರದೇಶದ ಮೂರೂವರೆ ದಶಕಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಆಡಳಿತಾರೂಢ ಪಕ್ಷವೊಂದು ಮತ್ತೊಮ್ಮೆ ಗದ್ದುಗೆ ಹಿಡಿದಿದೆ. ಬಿಜೆಪಿ ಭರ್ಜರಿ ಬಹುಮತದೊಂದಿಗೆ ಪುನರಾಯ್ಕೆಯಾಗಿದೆ. ಮೋದಿ- ಯೋಗಿ ಎಂಬ ‘ಡಬಲ್ ಎಂಜಿನ್’ ಎದುರು ಅಖಿಲೇಶ್ರ ‘ಸೈಕಲ್’ ಪಂಕ್ಚರ್ ಆಗಿದೆ.
Punjab: ಸಿಎಂನನ್ನೇ ಸೋಲಿಸಿದ ಮೊಬೈಲ್ ರಿಪೇರಿ ಮಾಡುವ ಕಾಮನ್ ಮ್ಯಾನ್
ಉತ್ತರಪ್ರದೇಶದಲ್ಲಿ ಕಾನೂನು- ಸುವ್ಯವಸ್ಥೆ ತಳಿ ತಪ್ಪಿತ್ತು. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಕಾನೂನು ಸುವ್ಯವಸ್ಥೆಯನ್ನು ಸರಿದಾರಿಗೆ ತರಲು ಯತ್ನಿಸಿದರು. ಗೂಂಡಾಗಳ ಹೆಡೆಮುರಿ ಕಟ್ಟಿದರು. ಸರ್ಕಾರದಿಂದ ಎಕ್ಸ್ಪ್ರೆಸ್ ವೇ, ಹೆದ್ದಾರಿ, ವಿಮಾನ ನಿಲ್ದಾಣದಂತಹ ಮೂಲಸೌಕರ್ಯ ಯೋಜನೆಗಳಿಗೆ ಒತ್ತು ನೀಡಿದರು. ಇದರ ಜತೆಗೆ ರೈತರ ಖಾತೆಗೆ ಹಣ ವರ್ಗಾಯಿಸುವ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್, ಉಚಿತ ಅಡುಗೆ ಅನಿಲ ಸಂಪರ್ಕ ನೀಡುವ ಉಜ್ವಲಾ, ಕೋವಿಡ್ ಸಂದರ್ಭದಲ್ಲಿ ಉಚಿತ ಆಹಾರ ಧಾನ್ಯ ನೀಡುವಂತಹ ಯೋಜನೆಗಳು, ಯಶಸ್ವಿಯಾಗಿ ಕೊರೋನಾ ನಿರ್ವಹಣೆ ಮತದಾರರ ಮನಗೆದ್ದವು.