ಚೈತ್ರಾ ಕುಂದಾಪುರ, ಕರಾವಳಿಯ ಫೈರ್ ಬ್ರಾಂಡ್, ಪ್ರಖರ ಭಾಷಣಗಾರ್ತಿ, ಆಕೆಯ ವಿರುದ್ಧ ಕೇಳಿಬಂದಿರುವ ಆರೋಪಗಳು, ಆಕೆಯ ವಿವಾದಗಳು ಒಂದೆರಡಲ್ಲ, ಇದೀಗ ಬಿಗ್ಬಾಸ್ ಮನೆಯಲ್ಲಿ ಆಕೆ ಸ್ಪರ್ಧಿಯಾಗಿದ್ದು, ಮೊದಲ ದಿನದಿಂದಲೇ ವಾಗ್ವಾದಗಳಲ್ಲಿ ತೊಡಗಿದ್ದಾರೆ. ಹಿಂದೂಪರ ವಿಚಾರಧಾರೆಗಳನ್ನು ಹೊಂದಿರುವ ಚೈತ್ರಾ ಕುಂದಾಪುರ ಒಂದು ಬಾರಿ ಭಾಷಣಕ್ಕೆ ಮುಖ್ಯ ಅತಿಥಿಯಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದಾಗ ತನ್ನ ಮೇಲೆ ಹಲ್ಲೆ ನಡೆದಿದೆ. ಚಿನ್ನದ ಸರ ಕದ್ದು ಹೋಗಿದೆ ಎಂದು ಪೊಲೀಸ್ ದೂರು ನೀಡಿದ್ದರು. ಇದೊಂದು ಸುಳ್ಳು ಆರೋಪ ಹೊರಿಸಿದ್ದಾರೆ ಎಂಬ ಆರೋಪ ಆಕೆಯ ಮೇಲೆ ಇತ್ತು.