ರೈತರ ಪರ ವಿದೇಶೀ ಗಣ್ಯರ ಟ್ವೀಟ್: ರಾಜ್ಯಸಭೆಯಲ್ಲಿ ಮೋದಿ ಪರೋಕ್ಷ ವಾಗ್ದಾಳಿ!

Feb 8, 2021, 1:20 PM IST

ನವದೆಹಲಿ(ಫೆ.08): ರಾಷ್ಟ್ರಪತಿ ಭಾಷಣ ರಾಮನಾಥ್ ಕೋವಿಂದ್ ಅವರ ಭಾಷಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಡಿದ್ದ ಭಾಷಣ ಅತ್ಯಂತ ಶಕ್ತಿಶಾಲಿಯಾಗಿತ್ತು ಮತ್ತು ಕೆಲವರ ಅನುಪಸ್ಥಿತಿ ಬಳಿಕವೂ ಅದು ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತದ ವಿರುದ್ಧ ವಿದೇಶೀ ಷಡ್ಯಂತ್ರ ನಡೆದಿದೆ ಎಂದು ಪಿಎಂ ಮೋದಿ ಪರೋಕ್ಷ ವಾಗ್ದಾಳಿಯನ್ನೂ ನಡೆಸಿದ್ದಾರೆ. ಭಾರತದ ವಿರುದ್ಧ ಟ್ವೀಟ್ ಸಮರ ನಡೆದಿದೆ. FDI ಅಂದ್ರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಎಂದಿತ್ತು. ಆದರೀಗ ಇದು ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿಯಾಗಿದೆ ಎಂದು ಕಿಡಿ ಕಾರಿದ್ದಾರೆ.