Feb 16, 2020, 9:37 PM IST
ನವದೆಹಲಿ, [ಫೆ.16]: ಎಲ್ಲೆಲ್ಲೂ ಜನಸಾಗರ. ಆಪ್ ಕಾರ್ಯಕರ್ತರ ಹರ್ಷೋದ್ಗಾರ. ರಾರಾಜಿಸಿದ ನೆಚ್ಚಿನ ನಾಯಕನ ಪೋಸ್ಟರ್, ತ್ರಿವರ್ಣ ಧ್ವಜ. ಈ ಎಲ್ಲಾ ದೃಶ್ಯಕ್ಕೆ ಸಾಕ್ಷಿಯಾಗಿದ್ದು 3ನೇ ಬಾರಿಗೆ ಸಿಎಂ ಆದ ಅರವಿಂದ್ ಕೇಜ್ರಿವಾಲ್ ಪದಗ್ರಹಣ.
ಈಶ್ವರ್ ಕಾ ಶಪಥ್: ದೆಹಲಿ ಸಿಎಂ ಆಗಿ ಕೇಜ್ರಿ ಪ್ರಮಾಣವಚನ!
ಹೌದು..ದೆಹಲಿಯ ರಾಮ್ ಲೀಲಾ ಮೈದಾನ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ, ಮಫ್ಲರ್ ಮ್ಯಾನ್ ಕೇಜ್ರಿಗೆ, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಪ್ರತಿಜ್ಞಾವಿಧಿ ಭೋದಿಸಿದ್ರು.. ಹಾಗಾದ್ರೆ, ದೆಹಲಿಯಲ್ಲಿ ಕೇಜ್ರಿವಾಲ್ ಕ್ರೇಜ್ ಹೇಗಿತ್ತು ಎನ್ನುವುದನ್ನು ಇಂಡಿಯಾ ರೌಂಡ್ಸ್ ವಿತ್ ಮಂಜು ತೋರಿಸ್ತಾರೆ ನೋಡಿ.