ಪರೀಕ್ಷಿತ ಮಹಾರಾಜನ ಅಂತ್ಯ ಮಾಡಿದ ತಕ್ಷಕ ನಿಮಿತ್ತ ಮಾತ್ರ, ಇಚ್ಛೆ ಶ್ರೀ ಹರಿಯದ್ದು!

Mar 7, 2021, 5:42 PM IST

ತನ್ನ ತಂದೆ ಪರೀಕ್ಷಿತ ಮಹಾರಾಜನನ್ನು ಕಚ್ಚಿ ಸಾಯಿಸಿದ ಎಂದು ತಕ್ಷಕನ ಮೇಲೆ ಜನಮೇಜೇಯ ಕೋಪಗೊಂಡು ಸರ್ಪಯಾಗ ಮಾಡುತ್ತಾನೆ. ಆದರೆ ತಕ್ಷಕ ಮಾತ್ರ ಬರುವುದಿಲ್ಲ. ಯಾಕೆ ಎಂದು ಋತ್ವಿಕರನ್ನು ಕೇಳಿದಾಗ ತಕ್ಷಕ ಇಂದ್ರನ ಬಳಿ ಓಡಿ ಹೋಗಿ ಅವಿತುಕೊಂಡಿರುತ್ತಾನೆ.

ಇಂದ್ರನ ಸಮೇತ ತಕ್ಷಕ ಬಂದು ಬೀಳಲಿ ಎಂದು ಘರ್ಜಿಸುತ್ತಾನೆ. ಆಗ ಬೃಹಸ್ಪತಿ ಅಡ್ಡ ಬಂದು, ಅದು ಸಾಧ್ಯವಿಲ್ಲ ರಾಜಾ, ಸಮುದ್ರ ಮಥನದಲ್ಲಿ ತಕ್ಷಕ ಅಮೃತವನ್ನು ಕುಡಿದವನು. ಹಾಗಾಗಿ ಏನೂ ಮಾಡಲು ಸಾಧ್ಯವಿಲ್ಲ. ಇವೆಲ್ಲವೂ ಶ್ರೀಹರಿ ಇಚ್ಛೆ ಎನ್ನು ಜನಮೇಜಯನನ್ನು ಸಮಧಾನಪಡಿಸುತ್ತಾನೆ.