ಹೆತ್ತ ಮಗನೇ ತಾಯಿಯ ಹೆಣ ಹಾಕಿಬಿಟ್ಟನಾ..? ಪುತ್ರನ ನಡವಳಿಕೆ ಪೊಲೀಸರಿಗೆ ಕೊಟ್ಟಿತ್ತು ಸುಳಿವು ..!

ಹೆತ್ತ ಮಗನೇ ತಾಯಿಯ ಹೆಣ ಹಾಕಿಬಿಟ್ಟನಾ..? ಪುತ್ರನ ನಡವಳಿಕೆ ಪೊಲೀಸರಿಗೆ ಕೊಟ್ಟಿತ್ತು ಸುಳಿವು ..!

Published : Dec 01, 2023, 02:20 PM ISTUpdated : Dec 01, 2023, 02:35 PM IST

ತಾಯಿಯ ಕಥೆ ಮುಗಿಸಿ ಹುಡುಕುವ ನಾಟಕ ಮಾಡಿದ್ದ..!
ಅಜ್ಜಿಯನ್ನ ಕೊಂದು ಮನೆ ಬೀಗ ಹಾಕಿ ಹೋಗಿದ್ರು..!
ಸತ್ತು 3 ದಿನವಾದ್ರೂ ಮಕ್ಕಳಿಗೆ ಸುಳಿವೇ ಸಿಕ್ಕಿರಲಿಲ್ಲ..!
ಹಂತಕರು ಪೊಲೀಸರಿಗೆ ತಗ್ಲಾಕಿಕೊಂಡದ್ದೇ ರೋಚಕ..!
 

ಅವಳು 63 ವರ್ಷದ ವೃದ್ಧೆ. ಮಕ್ಕಳಿದ್ರೂ ಒಂಟಿಯಾಗಿ ಜೀವನ ಮಾಡ್ತಿದ್ಲು. ಕೂಲಿ ಮಾಡೋದು ಈಕೆಯ ಫುಲ್ ಟೈಂ ಜಾಬ್ ಆದ್ರೆ ದಾನಮ್ಮ ದೇವಿಯ ದೇವಸ್ಥಾನದ ಅರ್ಚಕಿಯಾಗಿ ಬಂದವರಿಗೆ ಭವಿಷ್ಯ ಹೇಳೋದು ಇವಳ ಪಾರ್ಟ್ ಟೈಂ ಜಾಬ್. ಜ್ಯೋತಿಷಿ ಹೇಳ್ತಿದ್ರಿಂದ ಈಕೆಗೆ ದುಡ್ಡು ಕಾಸಿನ ತೊಂದರೆ ಏನೂ ಇರಲಿಲ್ಲ. ಆದ್ರೆ ಆವತ್ತೊಂದು ದಿನ ಇದೇ ಅಜ್ಜಿ(Grand Mother) ತನ್ನದೇ ಮನೆಯಲ್ಲಿ ಹೆಣವಾಗಿ ಸಿಕ್ಕಿದ್ದಳು. ಒಂಟಿಯಾಗಿ ಜೀವನ ಮಾಡ್ತಿದ್ದವಳನ್ನ ಹಂತಕರು ಕೊಂದು ಎಸ್ಕೇಪ್ ಆಗಿದ್ರು. ಆದರೆ ತನಿಖೆ ನಡೆಸಿದ ಪೊಲೀಸರಿಗೆ(police) ಹಂತಕರ ಸುಳಿವು ಸಿಕ್ಕಿ ಹೆಡೆಮುರಿ ಕಟ್ಟೋ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು. ದಾನಮ್ಮ ದೇವಿಯ(Danamma Devi) ಪರಮ ಭಕ್ತಿಯಾಗಿದ್ದ, ಜ್ಯೋತಿಷ್ಯ ಹೇಳುತ್ತಿದ್ದ ಅಜ್ಜಿ ರತ್ನಬಾಯಿಯ ಕೊಲೆ(Murder) ಪ್ರಕರಣ ಭೇದಿಸುವಲ್ಲಿ R.G ನಗರ ಪೊಲೀಸರು ಯಶಸ್ವಿಯಾದರು. ತನಿಖೆ ಕೈಗೊಂಡ ಪೊಲೀಸರಿಗೆ, ಹಂತಕರು ಯಾರು ಎನ್ನುವುದು ಗೊತ್ತಾಗಿ ಸ್ವತಃ ಪೊಲೀಸರೇ ಶಾಕ್ ಆಗುವಂತಾಗಿತ್ತು. ಗುಡ್ಡಾಪುರ ದಾನಮ್ಮ ದೇವಿಯ ಪರಮ ಭಕ್ತೆಯಾಗಿದ್ದ ಮತ್ತು  ಕಷ್ಟ ಅಂತ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಜ್ಯೋತಿಷ್ಯ ಹೇಳುತ್ತಿದ್ದ  ಅಜ್ಜಿಯನ್ನ ತನ್ನ ಸ್ವಂತ ಮಗನೇ ಕೊಂದು ಮುಗಿಸಿದ್ದ. ಅಜ್ಜಿಯ ಸ್ನೇಹಿತನೊಂದಿಗೆ ಸೇರಿಕೊಂಡು ಅಮ್ಮನ ಕಥೆ ಮುಗಿಸಿ ನಂತರ ತಾಯಿಯನ್ನ ಹುಡುಕೋ ನಾಟಕವಾಡಿದ್ದ. ನಾವು ಅಲ್ಲಿಗೆ ಹೋದಾಗಲೂ ನಮ್ಮ ಬಳಿ ಅಮ್ಮನ ಬಗ್ಗೆ ಮಾತನ್ನಾಡಿ ಕಣ್ಣೀರು ಹಾಕಿದ್ದ. ಸಲ್ಲದ ಚಟಕ್ಕೆ ದಾಸರಾದರೆ ಆಗಬಾರದ್ದು ಆಗುತ್ತೆ ಅನ್ನೋದಕ್ಕೆ ಈ ಸ್ಟೋರಿ ಉತ್ತಮ ಎಕ್ಸಾಂಪಲ್. ಇನ್ನೂ ತಾಯಿ ಮಗನ ಎದುರಲ್ಲೇ ಕೊಲೆಯಾಗಿ ಹೋದ್ರೆ, ಮಗ ಮತ್ತು ಗೆಳೆಯ ಮಾಡಬಾರದನ್ನ ಮಾಡಿ ಜೈಲು ಸೇರಿದ್ದಾರೆ.

ಇದನ್ನೂ ವೀಕ್ಷಿಸಿ:  ‘ಪಂಚ’ ಫಲಿತಾಂಶ ಲೋಕ ಕದನಕ್ಕೆ ದಿಕ್ಸೂಚಿನಾ..? ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ !

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more