ಸಾಯೋ ಕೊನೆ ಕ್ಷಣದಲ್ಲಿ ರಿವೀಲ್ ಆಯ್ತು ಡೆತ್ ಮಿಸ್ಟರಿ..! ಗೆಳೆಯನನ್ನ ಮನೆಗೆ ಕರೆದು ಬೆಂಕಿ ಹಚ್ಚಿದ್ಲಾ..?

ಸಾಯೋ ಕೊನೆ ಕ್ಷಣದಲ್ಲಿ ರಿವೀಲ್ ಆಯ್ತು ಡೆತ್ ಮಿಸ್ಟರಿ..! ಗೆಳೆಯನನ್ನ ಮನೆಗೆ ಕರೆದು ಬೆಂಕಿ ಹಚ್ಚಿದ್ಲಾ..?

Published : Dec 22, 2023, 02:56 PM IST

2 ಮಕ್ಕಳ ತಾಯಿಯ ಹಿಂದೆ ಹೋದವನು ಹೆಣವಾದ..!
ಏಕಾಂತದಲ್ಲಿದ್ದಾಗ ಬಂದಿತ್ತು ಮೂರನೇಯವನ ಕಾಲ್..!
ಮೊಬೈಲ್ ಚೆಕ್ ಮಾಡಿದಾಗ ನಿಜ ಬಣ್ಣ ಬಯಲಾಗಿತ್ತು..!

ಅವನು ಪೊಲೀಸ್ ಕಾನ್ಸ್ಟೇಬಲ್(Police Constable). ಬೆಂಗಳೂರಿನ(Bengaluru) ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಮೂಲತಃ ಹಾಸನದವನಾದ ಈತ ಬೆಂಗಳೂರಿನಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿದ್ದ. ಆದ್ರೆ ಆವತ್ತೊಂದು ದಿನ ಆತ ಆಸ್ಪತ್ರೆಗೆ ದಾಖಲಾಗಿದ್ದ. ಹೋಗಿ ವಿಚಾರಿಸಿದ್ರೆ ಗ್ಯಾಸ್ ಬ್ಲಾಸ್ಟ್ ಆಯ್ತು ಅಂದ. ಪೊಲೀಸರು(police) ಸಹ ಸುಮ್ಮನ್ನಾಗಿದ್ರು. ಆದ್ರೆ 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದವನು ಇವತ್ತು ಕೊನೆಯುಸಿರು ಎಳೆದುಬಿಟ್ಟಿದ್ದಾನೆ. ಸಾಯೋ ಎರಡು ದಿನ ಮುನ್ನ ಆತ ತನ್ನ ಸಾವಿನ ಹಿಂದಿನ ಸೀಕ್ರೆಟ್ ಅನ್ನ ಬಿಚ್ಚಿಟ್ಟಿದ್ದ. ಅದು ಗ್ಯಾಸ್ ಬ್ಲಾಸ್ಟ್ ಅಲ್ಲ ಬದಲಿಗೆ ಅವನನ್ನ ಪೆಟ್ರೋಲ್ ಹಾಕಿ ಸುಟ್ಟರು ಅಂದಿದ್ದ. ಮೊದಲು ಆ್ಯಕ್ಸಿಡೆಂಟಾಗಿ ಆದ ಗಾಯ ಅಂದಿದ್ದ ಸಂಜಯ್ಗೆ ತನ್ನ ಸಾವಿನ ಮುನ್ಸುಚನೆ ಸಿಕ್ಕಿತ್ತು ಅನಿಸುತ್ತೆ. ಇದೇ ಕಾರಣಕ್ಕೆ ಸಾಯೋಕು ಎರಡು ದಿನ ಮುನ್ನ ಪೊಲೀಸರನ್ನ ಕರೆದು ರಾಣಿಯ ಕಥೆ ಹೇಳಿದ್ದ. ಆಕೆಯೇ ನನಗೆ ಬೆಂಕಿ ಇಟ್ಟುಬಿಟ್ಟಳು.. ನನಗೆ ನ್ಯಾಯ ಕೊಡಿಸಿ ಅಂದಿದ್ದ. ಪೊಲೀಸ್ ಕೆಲಸ ಸಿಕ್ಕ ಮೇಲೆ ಬೆಂಗಳೂರಿಗೆ ಬಂದ ಸಂಜಯ್ಗೆ ರಾಣಿ ಅನ್ನೋ ಹೋಂ ಗಾರ್ಡ್ನ(Home guard) ಪರಿಚಯವಾಗಿತ್ತು.. ಆಕೆಗೋ ಮದುವೆಯಾಗಿ ಎರಡು ಮಕ್ಕಳಿದ್ವು. ಆದ್ರೂ ಇವರಿಬ್ಬರೂ ಲವ್ನಲ್ಲಿ ಬಿದ್ದಿದ್ರು. ಬೆಂಗಳೂರಿನಲ್ಲಿ ಒಬ್ಬಂಟಿಯಾಗಿದ್ದ ಸಂಜಯ್‌ಗೆ ರಾಣಿ ಸಂಗಾತಿಯಾಗಿದ್ಲು. ಇಬ್ಬರೂ ಕದ್ದು ಮುಚ್ಚಿ ಸೇರುತ್ತಿದ್ರು.. ಆದ್ರೆ ಆವತ್ತೊಂದು ದಿನ ಇಬ್ಬರೂ ಏಕಾಂತವಾಗಿರುವಾಗ್ಲೇ ಆಕೆಯ ಮೊಬೈಲ್‌ಗೆ ಒಂದು ಕಾಲ್ ಬರುತ್ತೆ.. ಆ ಕಾಲ್ ಸಂಜಯ್ಗೆ ರಾಣಿ ಮೇಲೆ ಅನುಮಾನ ಬರುವಂತೆ ಮಾಡುತ್ತೆ. ಆಕೆಯ ಫೋನ್ ಚೆಕ್ ಮಾಡಿದಾಗ ಆಕೆಗೆ ಮತ್ತೊಬ್ಬ ಫ್ರೆಂಡ್ ಇರೋದು ಗೊತ್ತಾಗುತ್ತೆ. ಪ್ರೀತಿ ಅಂಥ ನಂಬಿ ಹೋದವನನ್ನ ಈ ರೀತಿ ನರಳಿ ನರಳಿ ಸಾಯೋವಂತೆ ಮಾಡಿರೋದು ನಿಜಕ್ಕೂ ದೊಡ್ಡ ದುರಂತ.

ಇದನ್ನೂ ವೀಕ್ಷಿಸಿ:  ಸರ್ಕಾರದ ಟೀಕೆ..ಓಕೆ.. ದೇಶದ ತಂಟೆಗೆ ಬಂದ್ರೆ ಜೋಕೆ! ಏನು ಹೇಳುತ್ತಿವೆ 3 ಭಾರತೀಯ ಕಾನೂನು!

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more