ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

Published : Aug 04, 2023, 02:47 PM IST

ಅದೊಂದು ಕೇರಿಗೆ ಮಾತ್ರ ಕಲುಷಿತ ನೀರು ಬಂದಿದ್ದೇಗೆ?
ಅಪರೂಪಕ್ಕೆ ಗ್ರಾಮಕ್ಕೆ ಬಂದು ಹೋದವನು ಹೆಣವಾದ!
ಮಗಳನ್ನ ಕೆಣಕಿದಕ್ಕೆ ನೀರಿಗೆ ವಿಷ ಹಾಕಿದ್ನಾ..?
 

ಅದು ದಲಿತರೇ ವಾಸವಾಗಿರುವ ಓಣಿ. ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಕುಟುಂಬವೇ ಅಲ್ಲಿ ಜಾಸ್ತಿ. ಬಡತನವಿದ್ದರೂ ನೆಮ್ಮದಿಯಾಗಿದ್ದ ಕಟುಂಬಗಳು ಅವು. ಆದ್ರೆ ಇವತ್ತು ಅದೇ ಓಣಿ ಮಸಣವಾಗಿದೆ. ನಾಲ್ಕು ಜನ ಹೆಣವಾಗಿದ್ರೆ, 130ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಆದ್ರೆ ಅವರ ಈ ಸ್ಥಿತಿಗೆ ಕಾರಣ ಜೀವ ಜಲ..ಜೀವ ಜಲ ಇವರ ಪಾಲಿಗೆ ವಿಷಜಲವಾಗಿಬಿಟ್ಟಿತ್ತು. ರಾತ್ರಿ ನೀರು ಕುಡಿದು ಮಲಗಿದವರು ಬೆಳಗ್ಗೆ ಹೆಣವಾಗಿದ್ರು. ಇನ್ನೂ ನೀರು ಕಲುಷಿತವಾಗಲು ಕಾರಣವೇನು ಅನ್ನೋದನ್ನ ಅಧಿಕಾರಿಗಳು ತಿಳಿದುಕೊಳ್ಳುವಷ್ಟರಲ್ಲೇ ಆ ಓಣಿಯ ಜನ ಅದೊಬ್ಬನ ಮೇಲೆ ಆರೋಪ ಮಾಡೋದಕ್ಕೆ ಶುರು ಮಾಡಿದ್ರು. ಅವನೇ ನಾವು ಕುಡಿಯೋ ನೀರಿಗೆ ವಿಷ ಹಾಕಿದ್ದಾನೆ ಅನ್ನೋ ಆರೋಪ ಮಾಡತೊಡಗಿದ್ರು. ಅಷ್ಟಕ್ಕೂ ಕೋಟೆನಾಡು ಚಿತ್ರದುರ್ಗದಲ್ಲಿ(Chitradurga) ಯಾವಾಗ ಕವಾಡಿಗರಹಟ್ಟಿಯಲ್ಲಿ ಮೂರು ಹೆಣಗಳು ಬಿದ್ವೋ ಆ ದಲಿತ ಓಣಿಯಲ್ಲಿ ಗುಸುಗುಸು ಶುರುವಾಯ್ತು. ಕುಡಿಯುವ ನೀರಿಗೆ ಅವನೊಬ್ಬ ವಿಷ ಬೆರಸಿದ್ದಾನೆ ಅನ್ನೋ ಮಾತುಗಳು ಅಲ್ಲಿ ಹರಿದಾಡಿದ್ವು. ವರ್ಷದ ಹಿಂದೆ ದಲಿತ ಯುವಕನೊಬ್ಬ ಮಾಡಿದ ತಪ್ಪಿಗೆ ಇವತ್ತು ಇಡೀ ದಲಿತ(Dalit) ಓಣಿಗೇ ಆತ ವಿಷ ಹಾಕಿದ್ದಾನೆ ಅನ್ನೋ ಸುದ್ದಿ ಹರಡಿತ್ತು. ಅಷ್ಟಕ್ಕೂ ಆ ಓಣಿಯ ಜನ ಕುಡಿಯುವ ನೀರಿಗೆ ವಿಷ ಬೆರಸಲಾಗಿತ್ತಾ..? ಅವರೆಲ್ಲಾ ಆರೋಪ ಮಾಡುತ್ತಿರುವ ಅವನು ಯಾರು..?. ಕವಾಡಿಗರಹಟ್ಟಿ ಗ್ರಾಮದಲ್ಲಿ ಎರಡು ಓವರ್ ವಾಟರ್ ಟ್ಯಾಂಕ್‌ಗಳಿವೆ(water tank). ಒಂದು ಟ್ಯಾಂಕರ್ ದಲಿತ ಓಣಿಗೆ ಹೋದ್ರೆ ಮತ್ತೊಂದು ಮಿಕ್ಕ ಗ್ರಾಮದ ಮನೆಗಳಿಗೆ ಹೋಗುತ್ತೆ. ಆದ್ರೆ ಎರಡೂ ವಾಟರ್ ಟ್ಯಾಂಕ್‌ಗಳಿಗೂ ಒಬ್ಬನೇ ವಾಟರ್ ಮ್ಯಾನ್. ಒಂದು ವರ್ಷದ ಹಿಂದೆ ಇದೇ ವಾಟರ್‌ಮ್ಯಾನ್‌ ಮಗಳಿಗೆ ದಲಿತ ಓಣಿಯ ಯುವಕನೊಬ್ಬ ಕೆಣಕಿದ್ದ. ಆವತ್ತು ಇದೇ ಘಟನೆ ಸಂಬಂದ ಪ್ರಕರಣ ಕೂಡ ದಾಖಲಾಗಿತ್ತು. ಆದ್ರೆ ಇದೇ ವಿಷ್ಯವಾಗಿ ವಾಟರ್ಮ್ಯಾನ್ ದಲಿತರ ಓಣಿಯ ಜನರ ಮೇಲೆ ದ್ವೇಷ ಸಾಧಿಸುತ್ತಲೇ ಇದ್ದ. ಆದ್ರೆ ಮೊನ್ನೆ ವರ್ಷದ ಹಿಂದಿನ ಸೇಡನ್ನ ನೀರಿಗೆ ವಿಷ ಹಾಕುವ ಮೂಲಕ ತೀರಿಸಿಕೊಂಡಿದ್ದಾನೆ ಅನ್ನೋದು ಆ ಓಣಿಯ ಜನರ ಆರೋಪವಾಗಿದೆ.

ಇದನ್ನೂ ವೀಕ್ಷಿಸಿ:  ಸಿದ್ದರಾಮೋತ್ಸವಕ್ಕೆ ಒಂದು ವರ್ಷ.. ಸಿದ್ದು ಚರಿಷ್ಮಾವನ್ನೇ ಬದಲಿಸಿದ್ದು ಹೇಗೆ "ದಾವಣಗೆರೆ" ಸಮಾವೇಶ..?

20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
Read more