ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

Published : Aug 04, 2023, 02:47 PM IST

ಅದೊಂದು ಕೇರಿಗೆ ಮಾತ್ರ ಕಲುಷಿತ ನೀರು ಬಂದಿದ್ದೇಗೆ?
ಅಪರೂಪಕ್ಕೆ ಗ್ರಾಮಕ್ಕೆ ಬಂದು ಹೋದವನು ಹೆಣವಾದ!
ಮಗಳನ್ನ ಕೆಣಕಿದಕ್ಕೆ ನೀರಿಗೆ ವಿಷ ಹಾಕಿದ್ನಾ..?
 

ಅದು ದಲಿತರೇ ವಾಸವಾಗಿರುವ ಓಣಿ. ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಕುಟುಂಬವೇ ಅಲ್ಲಿ ಜಾಸ್ತಿ. ಬಡತನವಿದ್ದರೂ ನೆಮ್ಮದಿಯಾಗಿದ್ದ ಕಟುಂಬಗಳು ಅವು. ಆದ್ರೆ ಇವತ್ತು ಅದೇ ಓಣಿ ಮಸಣವಾಗಿದೆ. ನಾಲ್ಕು ಜನ ಹೆಣವಾಗಿದ್ರೆ, 130ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಆದ್ರೆ ಅವರ ಈ ಸ್ಥಿತಿಗೆ ಕಾರಣ ಜೀವ ಜಲ..ಜೀವ ಜಲ ಇವರ ಪಾಲಿಗೆ ವಿಷಜಲವಾಗಿಬಿಟ್ಟಿತ್ತು. ರಾತ್ರಿ ನೀರು ಕುಡಿದು ಮಲಗಿದವರು ಬೆಳಗ್ಗೆ ಹೆಣವಾಗಿದ್ರು. ಇನ್ನೂ ನೀರು ಕಲುಷಿತವಾಗಲು ಕಾರಣವೇನು ಅನ್ನೋದನ್ನ ಅಧಿಕಾರಿಗಳು ತಿಳಿದುಕೊಳ್ಳುವಷ್ಟರಲ್ಲೇ ಆ ಓಣಿಯ ಜನ ಅದೊಬ್ಬನ ಮೇಲೆ ಆರೋಪ ಮಾಡೋದಕ್ಕೆ ಶುರು ಮಾಡಿದ್ರು. ಅವನೇ ನಾವು ಕುಡಿಯೋ ನೀರಿಗೆ ವಿಷ ಹಾಕಿದ್ದಾನೆ ಅನ್ನೋ ಆರೋಪ ಮಾಡತೊಡಗಿದ್ರು. ಅಷ್ಟಕ್ಕೂ ಕೋಟೆನಾಡು ಚಿತ್ರದುರ್ಗದಲ್ಲಿ(Chitradurga) ಯಾವಾಗ ಕವಾಡಿಗರಹಟ್ಟಿಯಲ್ಲಿ ಮೂರು ಹೆಣಗಳು ಬಿದ್ವೋ ಆ ದಲಿತ ಓಣಿಯಲ್ಲಿ ಗುಸುಗುಸು ಶುರುವಾಯ್ತು. ಕುಡಿಯುವ ನೀರಿಗೆ ಅವನೊಬ್ಬ ವಿಷ ಬೆರಸಿದ್ದಾನೆ ಅನ್ನೋ ಮಾತುಗಳು ಅಲ್ಲಿ ಹರಿದಾಡಿದ್ವು. ವರ್ಷದ ಹಿಂದೆ ದಲಿತ ಯುವಕನೊಬ್ಬ ಮಾಡಿದ ತಪ್ಪಿಗೆ ಇವತ್ತು ಇಡೀ ದಲಿತ(Dalit) ಓಣಿಗೇ ಆತ ವಿಷ ಹಾಕಿದ್ದಾನೆ ಅನ್ನೋ ಸುದ್ದಿ ಹರಡಿತ್ತು. ಅಷ್ಟಕ್ಕೂ ಆ ಓಣಿಯ ಜನ ಕುಡಿಯುವ ನೀರಿಗೆ ವಿಷ ಬೆರಸಲಾಗಿತ್ತಾ..? ಅವರೆಲ್ಲಾ ಆರೋಪ ಮಾಡುತ್ತಿರುವ ಅವನು ಯಾರು..?. ಕವಾಡಿಗರಹಟ್ಟಿ ಗ್ರಾಮದಲ್ಲಿ ಎರಡು ಓವರ್ ವಾಟರ್ ಟ್ಯಾಂಕ್‌ಗಳಿವೆ(water tank). ಒಂದು ಟ್ಯಾಂಕರ್ ದಲಿತ ಓಣಿಗೆ ಹೋದ್ರೆ ಮತ್ತೊಂದು ಮಿಕ್ಕ ಗ್ರಾಮದ ಮನೆಗಳಿಗೆ ಹೋಗುತ್ತೆ. ಆದ್ರೆ ಎರಡೂ ವಾಟರ್ ಟ್ಯಾಂಕ್‌ಗಳಿಗೂ ಒಬ್ಬನೇ ವಾಟರ್ ಮ್ಯಾನ್. ಒಂದು ವರ್ಷದ ಹಿಂದೆ ಇದೇ ವಾಟರ್‌ಮ್ಯಾನ್‌ ಮಗಳಿಗೆ ದಲಿತ ಓಣಿಯ ಯುವಕನೊಬ್ಬ ಕೆಣಕಿದ್ದ. ಆವತ್ತು ಇದೇ ಘಟನೆ ಸಂಬಂದ ಪ್ರಕರಣ ಕೂಡ ದಾಖಲಾಗಿತ್ತು. ಆದ್ರೆ ಇದೇ ವಿಷ್ಯವಾಗಿ ವಾಟರ್ಮ್ಯಾನ್ ದಲಿತರ ಓಣಿಯ ಜನರ ಮೇಲೆ ದ್ವೇಷ ಸಾಧಿಸುತ್ತಲೇ ಇದ್ದ. ಆದ್ರೆ ಮೊನ್ನೆ ವರ್ಷದ ಹಿಂದಿನ ಸೇಡನ್ನ ನೀರಿಗೆ ವಿಷ ಹಾಕುವ ಮೂಲಕ ತೀರಿಸಿಕೊಂಡಿದ್ದಾನೆ ಅನ್ನೋದು ಆ ಓಣಿಯ ಜನರ ಆರೋಪವಾಗಿದೆ.

ಇದನ್ನೂ ವೀಕ್ಷಿಸಿ:  ಸಿದ್ದರಾಮೋತ್ಸವಕ್ಕೆ ಒಂದು ವರ್ಷ.. ಸಿದ್ದು ಚರಿಷ್ಮಾವನ್ನೇ ಬದಲಿಸಿದ್ದು ಹೇಗೆ "ದಾವಣಗೆರೆ" ಸಮಾವೇಶ..?

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more