ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

ಹಳೇ ಸಿಟ್ಟಿಗೆ ಸೇಡು ತೀರಿಸಿಕೊಂಡನಾ ವಾಟರ್‌ಮ್ಯಾನ್‌ ?: ಕಲುಷಿತ ನೀರು ಸೇವಿಸಿ 130 ಮಂದಿ ಅಸ್ವಸ್ಥ !

Published : Aug 04, 2023, 02:47 PM IST

ಅದೊಂದು ಕೇರಿಗೆ ಮಾತ್ರ ಕಲುಷಿತ ನೀರು ಬಂದಿದ್ದೇಗೆ?
ಅಪರೂಪಕ್ಕೆ ಗ್ರಾಮಕ್ಕೆ ಬಂದು ಹೋದವನು ಹೆಣವಾದ!
ಮಗಳನ್ನ ಕೆಣಕಿದಕ್ಕೆ ನೀರಿಗೆ ವಿಷ ಹಾಕಿದ್ನಾ..?
 

ಅದು ದಲಿತರೇ ವಾಸವಾಗಿರುವ ಓಣಿ. ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಕುಟುಂಬವೇ ಅಲ್ಲಿ ಜಾಸ್ತಿ. ಬಡತನವಿದ್ದರೂ ನೆಮ್ಮದಿಯಾಗಿದ್ದ ಕಟುಂಬಗಳು ಅವು. ಆದ್ರೆ ಇವತ್ತು ಅದೇ ಓಣಿ ಮಸಣವಾಗಿದೆ. ನಾಲ್ಕು ಜನ ಹೆಣವಾಗಿದ್ರೆ, 130ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಆದ್ರೆ ಅವರ ಈ ಸ್ಥಿತಿಗೆ ಕಾರಣ ಜೀವ ಜಲ..ಜೀವ ಜಲ ಇವರ ಪಾಲಿಗೆ ವಿಷಜಲವಾಗಿಬಿಟ್ಟಿತ್ತು. ರಾತ್ರಿ ನೀರು ಕುಡಿದು ಮಲಗಿದವರು ಬೆಳಗ್ಗೆ ಹೆಣವಾಗಿದ್ರು. ಇನ್ನೂ ನೀರು ಕಲುಷಿತವಾಗಲು ಕಾರಣವೇನು ಅನ್ನೋದನ್ನ ಅಧಿಕಾರಿಗಳು ತಿಳಿದುಕೊಳ್ಳುವಷ್ಟರಲ್ಲೇ ಆ ಓಣಿಯ ಜನ ಅದೊಬ್ಬನ ಮೇಲೆ ಆರೋಪ ಮಾಡೋದಕ್ಕೆ ಶುರು ಮಾಡಿದ್ರು. ಅವನೇ ನಾವು ಕುಡಿಯೋ ನೀರಿಗೆ ವಿಷ ಹಾಕಿದ್ದಾನೆ ಅನ್ನೋ ಆರೋಪ ಮಾಡತೊಡಗಿದ್ರು. ಅಷ್ಟಕ್ಕೂ ಕೋಟೆನಾಡು ಚಿತ್ರದುರ್ಗದಲ್ಲಿ(Chitradurga) ಯಾವಾಗ ಕವಾಡಿಗರಹಟ್ಟಿಯಲ್ಲಿ ಮೂರು ಹೆಣಗಳು ಬಿದ್ವೋ ಆ ದಲಿತ ಓಣಿಯಲ್ಲಿ ಗುಸುಗುಸು ಶುರುವಾಯ್ತು. ಕುಡಿಯುವ ನೀರಿಗೆ ಅವನೊಬ್ಬ ವಿಷ ಬೆರಸಿದ್ದಾನೆ ಅನ್ನೋ ಮಾತುಗಳು ಅಲ್ಲಿ ಹರಿದಾಡಿದ್ವು. ವರ್ಷದ ಹಿಂದೆ ದಲಿತ ಯುವಕನೊಬ್ಬ ಮಾಡಿದ ತಪ್ಪಿಗೆ ಇವತ್ತು ಇಡೀ ದಲಿತ(Dalit) ಓಣಿಗೇ ಆತ ವಿಷ ಹಾಕಿದ್ದಾನೆ ಅನ್ನೋ ಸುದ್ದಿ ಹರಡಿತ್ತು. ಅಷ್ಟಕ್ಕೂ ಆ ಓಣಿಯ ಜನ ಕುಡಿಯುವ ನೀರಿಗೆ ವಿಷ ಬೆರಸಲಾಗಿತ್ತಾ..? ಅವರೆಲ್ಲಾ ಆರೋಪ ಮಾಡುತ್ತಿರುವ ಅವನು ಯಾರು..?. ಕವಾಡಿಗರಹಟ್ಟಿ ಗ್ರಾಮದಲ್ಲಿ ಎರಡು ಓವರ್ ವಾಟರ್ ಟ್ಯಾಂಕ್‌ಗಳಿವೆ(water tank). ಒಂದು ಟ್ಯಾಂಕರ್ ದಲಿತ ಓಣಿಗೆ ಹೋದ್ರೆ ಮತ್ತೊಂದು ಮಿಕ್ಕ ಗ್ರಾಮದ ಮನೆಗಳಿಗೆ ಹೋಗುತ್ತೆ. ಆದ್ರೆ ಎರಡೂ ವಾಟರ್ ಟ್ಯಾಂಕ್‌ಗಳಿಗೂ ಒಬ್ಬನೇ ವಾಟರ್ ಮ್ಯಾನ್. ಒಂದು ವರ್ಷದ ಹಿಂದೆ ಇದೇ ವಾಟರ್‌ಮ್ಯಾನ್‌ ಮಗಳಿಗೆ ದಲಿತ ಓಣಿಯ ಯುವಕನೊಬ್ಬ ಕೆಣಕಿದ್ದ. ಆವತ್ತು ಇದೇ ಘಟನೆ ಸಂಬಂದ ಪ್ರಕರಣ ಕೂಡ ದಾಖಲಾಗಿತ್ತು. ಆದ್ರೆ ಇದೇ ವಿಷ್ಯವಾಗಿ ವಾಟರ್ಮ್ಯಾನ್ ದಲಿತರ ಓಣಿಯ ಜನರ ಮೇಲೆ ದ್ವೇಷ ಸಾಧಿಸುತ್ತಲೇ ಇದ್ದ. ಆದ್ರೆ ಮೊನ್ನೆ ವರ್ಷದ ಹಿಂದಿನ ಸೇಡನ್ನ ನೀರಿಗೆ ವಿಷ ಹಾಕುವ ಮೂಲಕ ತೀರಿಸಿಕೊಂಡಿದ್ದಾನೆ ಅನ್ನೋದು ಆ ಓಣಿಯ ಜನರ ಆರೋಪವಾಗಿದೆ.

ಇದನ್ನೂ ವೀಕ್ಷಿಸಿ:  ಸಿದ್ದರಾಮೋತ್ಸವಕ್ಕೆ ಒಂದು ವರ್ಷ.. ಸಿದ್ದು ಚರಿಷ್ಮಾವನ್ನೇ ಬದಲಿಸಿದ್ದು ಹೇಗೆ "ದಾವಣಗೆರೆ" ಸಮಾವೇಶ..?

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more