8 ತಿಂಗಳ ಹಿಂದೆ ನಾಪತ್ತೆ..ಈಗ ಮರ್ಡರ್..! ಜಮೀನಿನಲ್ಲಿ ಅವನ ಎಲುಬುಗಳು ಪತ್ತೆ..!

8 ತಿಂಗಳ ಹಿಂದೆ ನಾಪತ್ತೆ..ಈಗ ಮರ್ಡರ್..! ಜಮೀನಿನಲ್ಲಿ ಅವನ ಎಲುಬುಗಳು ಪತ್ತೆ..!

Published : Jul 03, 2024, 05:31 PM IST

ಮೃತದೇಹದ ಭಾಗಗಳನ್ನ ಒಂದೊಂದು ದಿಕ್ಕಿನಲ್ಲಿ ಹೂತಿಟ್ಟಿದ್ರು..!
ಅವನ ಹೆಣ ಹಾಕಿ ಹುಡುಗಿ ಜೊತೆ ಪರಾರಿ ಅಂತ ಸುದ್ದಿ ಹರಡಿದ್ರು..!
ಕೊಲೆಯಾದ ವ್ಯಕ್ತಿ ಎಲುಬುಗಳು  ಗ್ರಾಮದ ಜಮೀನೊಂದರಲ್ಲಿ ಪತ್ತೆ

ಅವನು ಕೂಲಿ ಕಾರ್ಮಿಕ. ಮದುವೆಯಾಗಿ ಒಂದು ವರ್ಷವಾಗಿತ್ತಷ್ಟೇ. ತಾನಾಯ್ತು ತನ್ನ ಸಂಸಾರವಾಯ್ತು ಅಂತ ಇದ್ದವನು. ಆದ್ರೆ ಆವತ್ತು ಆತ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟ. ಎಲ್ಲಿ ಹುಡುಕಿದ್ರೂ ಆತ ಸಿಗೋದೇ ಇಲ್ಲ. ಇದೇ ಟೈಂನಲ್ಲಿ ಆತ ಯುವತಿಯೊಂದಿಗೆ ಓಡಿಹೋಗಿದ್ದಾನೆ ಅನ್ನೋ ಗುಸುಗುಸು ಊರಲ್ಲೆಲ್ಲಾ ಹರಡಿಬಿಟ್ಟಿತ್ತು. ಅವನ ಕುಟುಂಬ ಪೊಲೀಸ್ ಕಂಪ್ಲೆಂಟ್ ಕೊಡ್ತು ಆದ್ರೂ ನೋ ಯೂಸ್. ಆದ್ರೆ ಆತ ನಾಪತ್ತೆಯಾಗಿ ಬರೊಬ್ಬರಿ 8 ತಿಂಗಳ ನಂತರ ಅವನ(youth) ಎಲುಬುಗಳು ಅವನದ್ದೇ ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿತ್ತು. ಅಲ್ಲಿವರೆಗೂ ಸೈಲೆಂಟಾಗಿದ್ದ ಪೊಲೀಸರು(Police) ಎಚ್ಚೆತ್ತಿದ್ರು ಒಂದು ಡೆಡ್ಲಿ ಮರ್ಡರ್(Murder) ಕೇಸ್‌ನ ಪತ್ತೆ ಹಚ್ಚಿದ್ರು. ಹಂತಕರೆಲ್ಲ ಸೇರಿ ದೃಶ್ಯಂ ಸಿನಿಮಾ ರೀತಿಯಲ್ಲೆ ಊರಲ್ಲಿ ಒಂದು ದೃಶ್ಯವನ್ನ ರೀಕ್ರಿಯೆಟ್‌ ಮಾಡಿ ಪೊಲೀಸ್‌ ಇಲಾಖೆ ಹಾಗೂ ಊರ ಮಂದಿಯನ್ನ ನಂಬಿಸಿದ್ರು. ಆದ್ರೆ ಕೊಲೆಯಾದ ದಾವಲ್‌ ಮನೆಯವರೆ ಇನ್ವೆಷ್ಟಿಗೇಶನ್‌ಗೆ ಇಳಿದಿದ್ರು. ಅಷ್ಟೇ ಅಲ್ಲ ಅವರೇ ಸಾಕ್ಷಿಗಳನ್ನ ಹೊರತೆಗೆದಿದ್ರು. ದಾವಲ್‌ ಮರ್ಡರ್‌ ಕೇಸ್‌(Murder case) ಬಗ್ಗೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ರು. ಮಿಸ್ಸಿಂಗ್‌ ಕೇಸ್‌ ಬಂದಾಗ ತನಿಖೆಗೆ ಇಳಿಯಬೇಕಿದ್ದ ಐ.ಓ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ವರ್ತಿಸಿದ್ರು. ಕೊನೆಗೆ ದಾವಲ್‌ ಮನೆಯವರೆ ಪೀಲ್ಡಿಗಿಳಿದಿದ್ರು. ಒಬ್ಬ ಕುರಿಗಾಯಿ ಕೊಟ್ಟ ಸುಳಿವನ್ನೇ ಹುಡುಕಿ ಹೊರಟ ಅವರು ಇಡೀ ಜಮೀನನ್ನೇ ಅಗೆದು ಅಗೆದು ಜಾಲಾಡಿದ್ರು.. ಆಗ ಸಿಕ್ಕಿದ್ದೇ ಮನೆ ಮಗನ ಎಲುಬುಗಳು.. ನಂತರ ಇದೇ ಎಲುಬುಗಳನ್ನ ಇಟ್ಟುಕೊಂಡು ಪ್ರಕರಣದ ಇನ್ವಷ್ಟಿಗೇಶನ್‌ ನಡೆಸಿ, ದಾವಲ್‌ ಮರ್ಡರ್‌ ಆಗಿದ್ದಾನೆ ಅನ್ನೋದಕ್ಕೆ ಸಾಕ್ಷಿಗಳನ್ನ ಹೊತ್ತು ಪೊಲೀಸರ ಬಳಿ ತಂದಿದ್ರು.

ಇದನ್ನೂ ವೀಕ್ಷಿಸಿ:  ಮೋದಿ ಹೇಳಿದ 3 ಕಥೆಗಳ ಅಸಲಿ ಮರ್ಮವೇನು ಗೊತ್ತಾ..? ಶಿವನ ಫೋಟೋ ಹಿಡಿದು ಅಖಾಡಕ್ಕಿಳಿದ ರಾಹುಲ್ ಗಾಂಧಿ!

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more