ಹಬ್ಬದ ಖುಷಿಯಲ್ಲಿದ್ದವರಿಗೆ ಡಬಲ್ ಮಾರ್ಡರ್ ಶಾಕ್..! ಅಥಿತಿ ಎದುರೇ ಹೆಂಡತಿ-ಅತ್ತೆ ಮರ್ಡರ್‌..!

ಹಬ್ಬದ ಖುಷಿಯಲ್ಲಿದ್ದವರಿಗೆ ಡಬಲ್ ಮಾರ್ಡರ್ ಶಾಕ್..! ಅಥಿತಿ ಎದುರೇ ಹೆಂಡತಿ-ಅತ್ತೆ ಮರ್ಡರ್‌..!

Published : Sep 26, 2023, 03:08 PM IST

ಎರಡು ಹೆಣ ಹಾಕಿ ಸೀದಾ ಪೊಲೀಸ್ ಠಾಣೆಗೆ ಹೋದ..!
ಹೆಂಡತಿ-ಅತ್ತೆಯನ್ನೇ ಕೊಂದಿದ್ದೇಕೆ ಪಾಪಿ ಗಂಡ..!
ಎಷ್ಟೇ ಬುದ್ಧಿ ಹೇಳಿದ್ರೂ ಕೇಳಿರಲಿಲ್ಲ ಹೆಂಡತಿ..!
 

ಅವರಿಬ್ಬರು ಮದುವೆಯಾಗಿ 15 ವರ್ಷವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಮೂವರು ಪುಟ್ಟಪುಟ್ಟ ಗಂಡು ಮಕ್ಕಳು ಕೂಡ ಆಗಿದ್ವು. ಆದರೆ ಇತ್ತೀಚೆಗೆ ಸುಖ ಸಂಸಾರದಲ್ಲಿ ಸಮಸ್ಯೆಗಳು ಆರಂಭವಾಗಿದ್ದವು. ಎಲ್ಲರ ಮನೆಯಂತೆ ಅವರ ಮನೆಯಲ್ಲೂ ಸಂಸಾರದ ಜಗಳ ಮಾಮೂಲೆಂಬಂತೆ ಇತ್ತು. ಆದರೆ ಆವತ್ತು ತಡರಾತ್ರಿ ನಡೆದ ಘಟನೆ ಮಾತ್ರ ಭಯಂಕರವಾಗಿತ್ತು. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಪತ್ನಿ ಹಾಗೂ ಆಕೆಯ ಅತ್ತೆ ಮೇಲೆ ಪತಿ ಮಹಾರಾಯ ಪೌರುಷ ತೋರಿದ್ದ. ಪುಟ್ಟ ಪುಟ್ಟ ಮೂವರು ಮಕ್ಕಳ ಭವಿಷ್ಯವನ್ನೂ ಚಿಂತಿಸದೇ ಮಾಡಬಾರದ ಕೆಲಸ ಮಾಡಿದ್ದ. ಗಣೇಶ ಚತುರ್ಥಿ ಸಡಗರಕ್ಕೆ ಸಾಕ್ಷಿಯಾಗಬೇಕಿದ್ದ ಮನೆಯಲ್ಲಿ ಸೂತಕವನ್ನೇ ಸೃಷ್ಟಿಸಿ ಬಿಟ್ಟಿದ್ದ. ತಂದೆಯ ಕೈಯ್ಯಲ್ಲಿ ತಾಯಿ ಹಾಗೂ ಅಜ್ಜಿ ಕೊಲೆಯಾದಳು(Murder), ತಾಯಿಯನ್ನು ಕೊಲೆ ಮಾಡಿದ ತಂದೆ ಜೈಲು ಪಾಲಾದ. ಮನೆಯಲ್ಲಿ ಉಳಿದಿರೋದು ಮೂವರು ಪುಟ್ಟ ಪುಟ್ಟ ಮಕ್ಕಳು ಮಾತ್ರ. ಮೂವರು ಮಕ್ಕಳಿಗೆ ಯಾರು ದಿಕ್ಕು ಎಂಬ ಪ್ರಶ್ನೆ ಮಾತ್ರ ಕಾಡುತ್ತಿದೆ. ಆತ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪೊಲೀಸ್ ಪೇದೆಯಾಗಿದ್ದ. ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ಆತನಿಗೆ ನಾಲ್ಕು ತಿಂಗಳ ಮುದ್ದಾದ ಮಗುವಿತ್ತು. ಆದ್ರೆ ಮದುವೆ ವೇಳೆ ತನಗೆ ಪಲ್ಸರ್ ಬೈಕ್ ಕೊಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಪತ್ನಿಗೆ ಕಿರುಕುಳ ನೀಡಲು ಶುರು ಮಾಡಿದ್ದ. ಆತನಿಗೆ ಮಗುವಿನ ನಗುವಿಗಿಂತ ವರದಕ್ಷಿಣೆಯದ್ದೇ ಚಿಂತೆಯಾಗಿಬಿಟ್ಟಿತ್ತು. ಅದೇ ಚಿಂತೆಯಲ್ಲಿ ಆವತ್ತು ಹೆಂಡತಿ ಮನೆಗೆ ಎಂಟ್ರಿ ಕೊಟ್ಟಿದ್ದ. ಊರಲ್ಲಿ ಜಾತ್ರೆ ಇದೆ ಮಗು ಕರೆದುಕೊಂಡು ಹೋಗ್ತೀನಿ ಅಂತಾ ಕ್ಯಾತೆ ತಗೆದಿದ್ದ. ಆದ್ರೆ ಯಾವಾಗ ಹೆಂಡತಿ ಬೇಡ ಅಂದಳೋ ಹುಟ್ಟಿಸಿದ ಅಪ್ಪನೇ 4 ತಿಂಗಳ ತನ್ನದೇ ಮಗುವಿನ ಉಸಿರು ನಿಲ್ಲಿಸಿದ್ದ. ಅದೇನೇ ಇರಲಿ ಗಣೇಶೋತ್ಸವ ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಪಾಪಿ ತಂದೆಗೆ ಇಡೀ ಊರಿನ ಜನ ಹಿಡಿಶಾಪ ಹಾಕುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಮಾತು ಜೋರು.. ನಿರ್ಧಾರ ನಿಧಾನ.. ನಡೆ ನಿಗೂಢ..! ಸಿದ್ದು ಸೈಲೆಂಟ್ ಆಟದ ಹಿಂದಿದ್ಯಾ ಪೊಲಿಟಿಕಲ್ ಗೇಮ್‌ಪ್ಲಾನ್..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more