Raichur Murder:  ಅವನನ್ನ ಮುಗಿಸಿದ್ದು ಅವನದ್ದೇ ಕುಟುಂಬಸ್ಥರು..! ಕೊಲೆಗೆ ಕಾರಣ 2 ದಶಕದ ಸೇಡು..!

Raichur Murder: ಅವನನ್ನ ಮುಗಿಸಿದ್ದು ಅವನದ್ದೇ ಕುಟುಂಬಸ್ಥರು..! ಕೊಲೆಗೆ ಕಾರಣ 2 ದಶಕದ ಸೇಡು..!

Published : Jan 07, 2024, 03:04 PM IST

ತೋಟಕ್ಕೆ ಹೋದವನನ್ನ ಕೊಚ್ಚಿ ಕೊಚ್ಚಿ ಕೊಂದರು..!
ಪರಿಹಾರದ ಹಣಕ್ಕಾಗಿ 2 ಕುಟುಂಬಗಳ ನಡುವೆ ಜಗಳ..!
ಅವನ ಹೆಣ ಹಾಕಲು ಆ ಕುಟುಂಬ ಕಾದಿದ್ದು 2 ದಶಕ..!

ಅವನು ಊರಿಗೆ ಉಪಕಾರಿಯಾಗಿದ್ದವನು. ಗ್ರಾಮದವರಿಗೆ ಏನೇ ಸರ್ಕಾರಿ ಸೌಲಭ್ಯಗಳು ಸಿಗಬೇಕಿದ್ರೂ ಈತನನ್ನೇ ಸಂಪರ್ಕಿಸುತ್ತಿದ್ರು. ಇಂಥವನನ್ನ ಆವತ್ತು ಹಂತಕರು ಬರ್ಬರವಾಗಿ ಕೊಂದು ಮುಗಿಸಿದ್ರು. ತನ್ನ ತೋಟಕ್ಕೆ ಹೋಗಿ ನೀರು ಬಿಟ್ಟು ವಾಪಸ್ ಆಗುತ್ತಿರುವಾಗ್ಲೇ ಆತನನ್ನ ಹಿಂಬಾಲಿಸಿ ಸಿನಿಮಾ ರೀತಿಯಲ್ಲಿ ಕೊಲೆ ಮಾಡಿದ್ರು. ಇನ್ನೂ ಈ ಕೊಲೆಗೆ ಸಾಕ್ಷಿಯಾಗಿದ್ದವನು ಕೊಲೆಯಾದವನ(Murder) ಸ್ನೇಹಿತನೇ. ಬೈಕ್ನಲ್ಲಿ ಹಿಂದೆ ಕೂತು ಬರ್ತಿದ್ದವನು ಆವತ್ತು ಹಂತಕರ ಎಂಟ್ರಿಯಾಗ್ತಿದ್ದಂತೆ ಎಸ್ಕೇಪ್ ಆಗಿದ್ದ. ಇನ್ನೂ ಇದೇ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ (Police)ದಶಕಗಳ ಕಾಲದ ದ್ವೇಷದ ವಾಸನೆ ಬಡೆದಿತ್ತು. ಕೆಲವರು ಅಣ್ಣ ತಮ್ಮಂದಿರಾದ್ರೆ. ಕೆಲವ್ರು ಮಾವ ಅಳಿಯ ಆಗಬೇಕಿರೋರು.. ಇಂಥ ತೀರಾ ಹತ್ತಿರ ಸಂಬಂಧಿಗಳೇ ಮಾರ್ಕಂಡಯ್ಯನನ್ನ ಕೊಚ್ಚಿ ಕೊಂದಿದ್ರು. ಎರಡು ದಶಕಗಳ ಹಿಂದೆ ಆ ಕುಟುಂಬ ಜೇನುಗೂಡಿನಂತಿತ್ತು. ಆದ್ರೆ ಈ ಟೈಂನಲ್ಲಿ ಗ್ರಾಮಕ್ಕೆ ಬಂದ ನಾರಾಯಣಪುರ ಬಲದಂಡೆ ಕಾಲುವೆಯ ಯೋಜನೆ ಆ ಕುಟುಂಬವನ್ನ ಎರಡು ಭಾಗ ಮಾಡಿತ್ತು. ಕಾಲುವೆಯ ಪರಿಹಾರದ ಹಣಕ್ಕಾಗಿ ಆ ಎರಡು ಕುಟುಂಬಗಳ ನಡುವೆ ದ್ವೇಷ ಹುಟ್ಟಿತ್ತು. ಅದು ಒಂದು ಹೆಣ ಬೀಳುವವರೆಗೂ ಹೋಗಿತ್ತು. ಆದ್ರೆ ಇನ್ನೇನು ಎಲ್ಲಾ ಮುಗೀತು ಅಂದುಕೊಳ್ಳುತ್ತಿರುವಾಗ್ಲೆ ಕೊಲೆಯಾದ ಮಾರ್ಖಂಡಯ್ಯನ ಸಹೋದರ ಗ್ರಾಮ ಪಂಚಾಯ್ತಿ ಎಲೆಕ್ಷನ್‌ಗೆ ನಿಂತ.. ಅವನ ಆಪೋಸಿಟ್ಟಾಗಿ ನಿಂತವನು ಮತ್ತದೇ ಎದುರಾಳಿ ಕುಟುಂಬದ ಹುಡುಗ. ಮಾರ್ಖಂಡಯ್ಯನೇನೋ ಗೆದ್ದು ಬಿಟ್ಟ ಆದ್ರೆ ಎದುರಳಿಯ ಸೋಲು ಅವನ ಕಥೆಯನ್ನೇ ಮುಗಿಸುವಂತೆ ಮಾಡಿಬಿಟ್ಟಿತ್ತು. ಮನೆಗೆ ಬೆನ್ನೆಲುಬಾಗಿದ್ದ ಮಾರ್ಖಂಡಯ್ಯನನ್ನ ಇವತ್ತು ಹೊಡೆದುಹಾಕಿದ್ದಾರೆ. ಆದ್ರೆ ಮಾರ್ಖಂಡಯ್ಯನ ಕುಟುಂಬಸ್ಥರು ಮಾತ್ರ ಸೇಡು ತೀರಿಸಿಕೊಳ್ಳುವ ಮಾತನ್ನಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಪಾತ್ರಧಾರಿಗಳ ಹಿಂದಿದ್ದಾರಾ ಆ "ರಿಯಲ್" ಸೂತ್ರಧಾರ..? ಡಿಕೆಗೆ ದಿಗ್ಬಂಧನ ಹಾಕಲು ಮುಂದಾಯ್ತಾ ಸಿದ್ದರಾಮಯ್ಯ ಬಣ..?

24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
Read more