Raichur Murder:  ಅವನನ್ನ ಮುಗಿಸಿದ್ದು ಅವನದ್ದೇ ಕುಟುಂಬಸ್ಥರು..! ಕೊಲೆಗೆ ಕಾರಣ 2 ದಶಕದ ಸೇಡು..!

Raichur Murder: ಅವನನ್ನ ಮುಗಿಸಿದ್ದು ಅವನದ್ದೇ ಕುಟುಂಬಸ್ಥರು..! ಕೊಲೆಗೆ ಕಾರಣ 2 ದಶಕದ ಸೇಡು..!

Published : Jan 07, 2024, 03:04 PM IST

ತೋಟಕ್ಕೆ ಹೋದವನನ್ನ ಕೊಚ್ಚಿ ಕೊಚ್ಚಿ ಕೊಂದರು..!
ಪರಿಹಾರದ ಹಣಕ್ಕಾಗಿ 2 ಕುಟುಂಬಗಳ ನಡುವೆ ಜಗಳ..!
ಅವನ ಹೆಣ ಹಾಕಲು ಆ ಕುಟುಂಬ ಕಾದಿದ್ದು 2 ದಶಕ..!

ಅವನು ಊರಿಗೆ ಉಪಕಾರಿಯಾಗಿದ್ದವನು. ಗ್ರಾಮದವರಿಗೆ ಏನೇ ಸರ್ಕಾರಿ ಸೌಲಭ್ಯಗಳು ಸಿಗಬೇಕಿದ್ರೂ ಈತನನ್ನೇ ಸಂಪರ್ಕಿಸುತ್ತಿದ್ರು. ಇಂಥವನನ್ನ ಆವತ್ತು ಹಂತಕರು ಬರ್ಬರವಾಗಿ ಕೊಂದು ಮುಗಿಸಿದ್ರು. ತನ್ನ ತೋಟಕ್ಕೆ ಹೋಗಿ ನೀರು ಬಿಟ್ಟು ವಾಪಸ್ ಆಗುತ್ತಿರುವಾಗ್ಲೇ ಆತನನ್ನ ಹಿಂಬಾಲಿಸಿ ಸಿನಿಮಾ ರೀತಿಯಲ್ಲಿ ಕೊಲೆ ಮಾಡಿದ್ರು. ಇನ್ನೂ ಈ ಕೊಲೆಗೆ ಸಾಕ್ಷಿಯಾಗಿದ್ದವನು ಕೊಲೆಯಾದವನ(Murder) ಸ್ನೇಹಿತನೇ. ಬೈಕ್ನಲ್ಲಿ ಹಿಂದೆ ಕೂತು ಬರ್ತಿದ್ದವನು ಆವತ್ತು ಹಂತಕರ ಎಂಟ್ರಿಯಾಗ್ತಿದ್ದಂತೆ ಎಸ್ಕೇಪ್ ಆಗಿದ್ದ. ಇನ್ನೂ ಇದೇ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ (Police)ದಶಕಗಳ ಕಾಲದ ದ್ವೇಷದ ವಾಸನೆ ಬಡೆದಿತ್ತು. ಕೆಲವರು ಅಣ್ಣ ತಮ್ಮಂದಿರಾದ್ರೆ. ಕೆಲವ್ರು ಮಾವ ಅಳಿಯ ಆಗಬೇಕಿರೋರು.. ಇಂಥ ತೀರಾ ಹತ್ತಿರ ಸಂಬಂಧಿಗಳೇ ಮಾರ್ಕಂಡಯ್ಯನನ್ನ ಕೊಚ್ಚಿ ಕೊಂದಿದ್ರು. ಎರಡು ದಶಕಗಳ ಹಿಂದೆ ಆ ಕುಟುಂಬ ಜೇನುಗೂಡಿನಂತಿತ್ತು. ಆದ್ರೆ ಈ ಟೈಂನಲ್ಲಿ ಗ್ರಾಮಕ್ಕೆ ಬಂದ ನಾರಾಯಣಪುರ ಬಲದಂಡೆ ಕಾಲುವೆಯ ಯೋಜನೆ ಆ ಕುಟುಂಬವನ್ನ ಎರಡು ಭಾಗ ಮಾಡಿತ್ತು. ಕಾಲುವೆಯ ಪರಿಹಾರದ ಹಣಕ್ಕಾಗಿ ಆ ಎರಡು ಕುಟುಂಬಗಳ ನಡುವೆ ದ್ವೇಷ ಹುಟ್ಟಿತ್ತು. ಅದು ಒಂದು ಹೆಣ ಬೀಳುವವರೆಗೂ ಹೋಗಿತ್ತು. ಆದ್ರೆ ಇನ್ನೇನು ಎಲ್ಲಾ ಮುಗೀತು ಅಂದುಕೊಳ್ಳುತ್ತಿರುವಾಗ್ಲೆ ಕೊಲೆಯಾದ ಮಾರ್ಖಂಡಯ್ಯನ ಸಹೋದರ ಗ್ರಾಮ ಪಂಚಾಯ್ತಿ ಎಲೆಕ್ಷನ್‌ಗೆ ನಿಂತ.. ಅವನ ಆಪೋಸಿಟ್ಟಾಗಿ ನಿಂತವನು ಮತ್ತದೇ ಎದುರಾಳಿ ಕುಟುಂಬದ ಹುಡುಗ. ಮಾರ್ಖಂಡಯ್ಯನೇನೋ ಗೆದ್ದು ಬಿಟ್ಟ ಆದ್ರೆ ಎದುರಳಿಯ ಸೋಲು ಅವನ ಕಥೆಯನ್ನೇ ಮುಗಿಸುವಂತೆ ಮಾಡಿಬಿಟ್ಟಿತ್ತು. ಮನೆಗೆ ಬೆನ್ನೆಲುಬಾಗಿದ್ದ ಮಾರ್ಖಂಡಯ್ಯನನ್ನ ಇವತ್ತು ಹೊಡೆದುಹಾಕಿದ್ದಾರೆ. ಆದ್ರೆ ಮಾರ್ಖಂಡಯ್ಯನ ಕುಟುಂಬಸ್ಥರು ಮಾತ್ರ ಸೇಡು ತೀರಿಸಿಕೊಳ್ಳುವ ಮಾತನ್ನಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಪಾತ್ರಧಾರಿಗಳ ಹಿಂದಿದ್ದಾರಾ ಆ "ರಿಯಲ್" ಸೂತ್ರಧಾರ..? ಡಿಕೆಗೆ ದಿಗ್ಬಂಧನ ಹಾಕಲು ಮುಂದಾಯ್ತಾ ಸಿದ್ದರಾಮಯ್ಯ ಬಣ..?

25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
Read more