ಕಂಡವರ ಸಂಸಾರದಲ್ಲಿ ಮೂಗು ತೂರಿಸಿದ್ದೇ ತಪ್ಪಾ ? ಎರಡನೇ ಪ್ರಯತ್ನದಲ್ಲಿ ದಲಿತ ನಾಯಕನ ಕೊಲೆ..!

Aug 31, 2023, 2:13 PM IST

ಅವನು ಆ ಭಾಗದ ದಲಿತ ನಾಯಕ.. ಕಾಂಗ್ರೆಸ್‌ನ ಸಕ್ರೀಯ ಕಾರ್ಯಕರ್ತ. ತನ್ನ ಗ್ರಾಮದ ಜನರಿಗೆ ಏನೇ ಸಮಸ್ಯೆ ಬಂದ್ರೂ ಅವರು ಬರ್ತಿದ್ದಿದ್ದೇ ಈತನ ಬಳಿ. ರಾಜಿ ಪಂಚಾಯ್ತಿಗಳಲ್ಲಿ ಸದಾ ಬ್ಯುಸಿ ಇರ್ತಿದ್ದ ಆ ದಲಿತ ನಾಯಕ ಆವತ್ತು ಇದ್ದಕ್ಕಿದ್ದಂತೆ ಮರ್ಡರ್ ಮಾಗಿಬಿಟ್ಟ. ಮನೆಗೆ ಹೋಗ್ತಿದ್ದವನನ್ನ ಹಿಂಬಾಲಿಸಿ ಹಂತಕರು ಅವನ ಕಥೆ ಮುಗಿಸಿದ್ರು. ಆದ್ರೆ ಇದೇ ಕೇಸ್‌ನ ಇನ್ವೆಸ್ಟಿಗೇಷನ್‌ಗೆ ಇಳಿದ ಪೊಲೀಸರಿಗೆ ಗೊತ್ತಾಗಿತ್ತು ಈ ದಲಿತ ನಾಯಕನ ಕೊಲೆ ಹಿಂದೆ ಒಂದು ಸಂಸಾರದ ಕಥೆ ಇತ್ತು ಅಂತ. ನಾರಾಯಣಸ್ವಾಮಿಯ ಕೊಲೆ ನಂತರ ಇಡೀ ಗ್ರಾಮವೇ ಹೊತ್ತಿಉರಿದಿತ್ತು. ಇನ್ನೂ ಆತನ ಕೊಲೆಯನ್ನ ಮಾಡಿದ್ಯಾರು ಅನ್ನೋದು ಅಲ್ಲಿದ್ದ ಪ್ರತಿಯೊಬ್ಬರಿಗೂ ಗೊತ್ತಿತ್ತು. 15 ದಿವಸ ಹಿಂದಷ್ಟೇ ನಾರಾಯಣಸ್ವಾಮಿಯ ಕಥೆ ಮುಗಿಸಲು ಬಂದವರೇ ಇವತ್ತು ಅವನನ್ನ ಹೊಡೆದು ಹಾಕಿದ್ದಾರೆ ಅನ್ನೋದು ಕನ್ಫರ್ಮ್ ಆಗಿತ್ತು. ಇದೇ ಕಾರಣಕ್ಕೆ ಗ್ರಾಮದ ಜನರೆಲ್ಲಾ ಅದೊಂದು ಮನೆಯ ಮುಂದೆ ಬಂದು ನಿಂತಿದ್ದಿದ್ದರು. ಪ್ರಮೋದ ತಾನೆ ಕೊಲೆ ಮಾಡಿರೋದಾಗಿ ಹೇಳಿಬಿಟ್ಟ. ಆದ್ರೆ ಆತ ನಾರಾಯಣಸ್ವಾಮಿಯನ್ನ ಕೊಂದಿದ್ದೇಕೆ ಅಂದ್ರೆ ಆತ ಹೆಳಿದ್ದು ಒಂದು ಸಂಸಾರದ ಕಥೆಯನ್ನ.. ಹಾಗಾದ್ರೆ ಏನದು ಸಂಸಾರದ ಕಥೆ..? ಆವತ್ತು ಘಟನೆ ನಡೆದ ದಿನ ಏನೇನಾಯ್ತು..? ಇಲ್ಲಿದೆ ಮಾಹಿತಿ..

ಇದನ್ನೂ ವೀಕ್ಷಿಸಿ:  ತಮಿಳುನಾಡು ನೆಲದಿಂದಲೇ ಸುವರ್ಣನ್ಯೂಸ್‌ ಗ್ರೌಂಡ್ ರಿಪೋರ್ಟ್! 'ಕಾವೇರಿ' ಎಡವಿದ್ದೆಲ್ಲಿ?