ಕೊರೋನಾ ವಾರಿಯರ್ಸ್‌ ಮೇಲೆ ಕುಟುಂಬಸ್ಥರ ಹಲ್ಲೆ..!

Jul 31, 2020, 11:23 AM IST

ಬೆಂಗಳೂರು(ಜು.31): ವೃದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಮಾಡಿಕೊಳ್ಳದಿದ್ದಕ್ಕೆ ಸಂಬಂಧಿಕರು ಕೊರೋನಾ ವಾರಿಯರ್ಸ್ ಆದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ಎಂ. ಎಸ್ ರಾಮಯ್ಯ ಆಸ್ಪತ್ರೆ ಆವರಣದಲ್ಲಿ ನಡೆದಿದೆ.

ಹೌದು, 75 ವರ್ಷದ ವೃದ್ದರೊಬ್ಬರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆ ತರಲಾಗಿದೆ. ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ 20 ನಿಮಿಷಗಳ ಕಾಲ ಕಾದರೂ ಆಡ್ಮಿಟ್ ಮಾಡಿಕೊಂಡಿಲ್ಲ. ಕೊನೆಗೆ ವೃದ್ದ ಆಂಬ್ಯಲೆನ್ಸ್‌ನಲ್ಲೇ ಪ್ರಾಣ ಬಿಟ್ಟಿದ್ದಾರೆ. ರೊಚ್ಚಿಗೆದ್ದ ಸಂಬಂಧಿಕರು ಆಂಬ್ಯಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.

ಹರ್ಡ್‌ ಇಮ್ಯುನಿಟಿ ಭಾರತಕ್ಕೆ ಸರಿ ಹೊಂದಲ್ಲ: ಕೇಂದ್ರ!

ಆಸ್ಪತ್ರೆಯವರು ಮಾಡಿದ ನಿರ್ಲಕ್ಷ್ಯಕ್ಕೆ ಆಂಬ್ಯುಲೆನ್ಸ್ ಚಾಲಕ ಶಿಕ್ಷೆ ಅನುಭವಿಸಿದ್ದಾರೆ. ಇದೀಗ ಹಲ್ಲೆ ಮಾಡಿದ ಮೃತನ ವ್ಯಕ್ತಿಯ ಕುಟುಂಬಸ್ಥರ ವಿರುದ್ಧ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಚಾಲಕ ದೂರು ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.